You are currently viewing ವಿಶ್ವ ಗುರು ಬಸವೇಶ್ವರ

ವಿಶ್ವ ಗುರು ಬಸವೇಶ್ವರ

ಬಿಜಾಪುರದ ಬಸವನ ಬಾಗೇವಾಡಿ ನಕ್ಷತ್ರ
ಸಮಾಜ ಪರಿವರ್ತನೆಗೆ ಪ್ರವರ್ತಕ ಪುತ್ರ
ಮಾದರಸ ಮಾದಲಾಂಬಿಕೆಯರ ಸುತನಾಗಿ
ವಿಶ್ವಗುರು ಬೆಳಕಾದ ಜಗಕೆ ಬಸವಣ್ಣನಾಗಿ

ಬಿಜ್ಜಳನ ಭಂಡಾರದ ಅಧಿಕಾರಿಯಾಗಿ
ಮಂತ್ರಿ ಹುದ್ದೆ ತ್ಯಜಿಸಿ ತಾನಾದ ಯೋಗಿ
ಅನುಭವ ಮಂಟಪ ಸ್ಥಾಪನೆಯ ಮಾಡಿ
ಮಾನವೀಯ ಮೌಲ್ಯ ವೃದ್ಧಿಸಿದ ನೋಡಿ

ಕಲ್ಯಾಣ ನಾಡಲ್ಲಿ ಕ್ರಾಂತಿ ಮಾಡಿದ ಕಿಡಿ
ಆತ್ಮ ಪರಿಶುದ್ಧತೆಗೆ ಭಕ್ತಿ ಮಾರ್ಗ ಹೂಡಿ
ಶಿವಶರಣರು ಜಾತಿಲಿಂಗ ತಾರತಮ್ಯ ದೂಡಿ
ಸಮಾನತೆ ಸಾರಿದರು ನಡೆನುಡಿ ಒಗ್ಗೂಡಿ

ಇಷ್ಟಲಿಂಗವ ಭಕ್ತಿಯಿಂದ ಧರಿಸಿ ನಿತ್ಯ ಜಪಿಸಿ
ಸಾವಿರಾರು ಅರ್ಥಪೂರ್ಣ ವಚನಗಳ ರಚಿಸಿ
ದೇಹವೇ ದೇಗುಲ ಸತ್ಯದ ಸರಳತೆ ಸಾಕ್ಷಾತ್ಕಾರ
ಕಾಯಕವೇ ಕೈಲಾಸ ಜಗದ ವಿಳಾಸ ಬಸವೇಶ್ವರ

ಅನ್ನಪೂರ್ಣ ಪದ್ಮಸಾಲಿ
ಶಿಕ್ಷಕಿ ,ಕೊಪ್ಪಳ

ಚಿತ್ರಕಲೆ ಬಿಡಿಸಿದ್ದು.
ಲಿಖಿತ್ ಕಾತರಕಿ
೭ ನೆಯ ತರಗತಿ
ಟಣಕನಕಲ್
ತಾ.ಜಿ.ಕೊಪ್ಪಳ



ಪ್ರಕಟಣೆಗಾಗಿ ಸಂಪರ್ಕಿಸಿ:

ಇದು ವೆಬ್ ಸೈಟ್ ಮತ್ತು ಯ್ಯಾಪ. ಇದರಲ್ಲಿ ಪ್ರಕಟಣೆಗಾಗಿ ನಿಮ್ಮ ಕವನ, ಕಥೆ, ಪ್ರಬಂಧ, ಲೇಖನ ಹಾಗೂ ಪುಸ್ತಕ ವಿಮರ್ಶೆಗಳನ್ನು ಕಳುಹಿಸಬಹುದು.
WhatsApp No. 8310000414 ಗೆ ಕಳುಹಿಸಬಹುದು.




This Post Has 2 Comments

  1. Likhit

    Super

    1. admin kbp

      ಧನ್ಯವಾದಗಳು 🙏🏻

Comments are closed.