ಬದಲಾಗಿಹುದು ಗೋಡೆಮೇಲಿನ
ದಿನದರ್ಶಿಕೆ ನಮ್ಮ ದಿನಚರಿಯಲ್ಲ
ಕಳೆದಿಹುದು ನಮ್ಮ ಆಯಸ್ಸು
ಕನಸುಗಳು ಕಮರಿ ಹೋಗಿಲ್ಲ
ಎರಡು ಸಾವಿರದ ಇಪ್ಪತ್ಮೂರು ವಿರಮಿಸಿತು
ದುಃಖ ದುಮ್ಮಾನ ಸುಖದ ಕ್ಷಣಗಳ
ನೆನಪಿಸಿತು ಆಗಮಿಸಿತು ಇಪ್ಪತ್ನಾಲ್ಕು
ನೋವು ಮರೆಸುವ ನಲಿವು ಬೇಕು
ಬಾಳಿನಲ್ಲಿ ಪ್ರೀತಿ- ನಗು ಯಶಸ್ಸು ತರಲಿ
ಕಳೆದ ಹೊತ್ತು ಮತ್ತೆ ಸಿಗಲಾರದು ನೆನಪಿರಲಿ
ಈ ಕ್ಷಣ ಸಂತಸದಿಂದ ಅನುಭವಿಸಿ
ಕಷ್ಟ ಬಂದರೂ ಧೃತಿಗೆಡದೇ ಎದುರಿಸಿ
ಹಣೆಬರಹದೊಂದಿಗೆ ದೇವರ ಆಶೀರ್ವಾದವೂ ಇರಲಿ
ಎಲ್ಲರಿಗೂ ಹೊಸ ವರ್ಷ ಶುಭವ ತರಲಿ
ಮನದ ಕಲ್ಮಶವೆಲ್ಲ ದೂರಾಗಿ ಬದುಕು ಹಸನಾಗಲಿ
ಒಳಿತಾಗಲಿ ಒಳಿತಿನೆಡೆ ಸಾಗಲಿ
ಉಷಾ ಪ್ರಶಾಂತ್
ಸಿದ್ದಾಪುರ
ಪ್ರಕಟಣೆಗಾಗಿ ಸಂಪರ್ಕಿಸಿ:
ಇದು ವೆಬ್ ಸೈಟ್ ಮತ್ತು ಯ್ಯಾಪ. ಇದರಲ್ಲಿ ಪ್ರಕಟಣೆಗಾಗಿ ನಿಮ್ಮ ಕವನ, ಕಥೆ, ಪ್ರಬಂಧ, ಲೇಖನ ಹಾಗೂ ಪುಸ್ತಕ ವಿಮರ್ಶೆಗಳನ್ನು ಕಳುಹಿಸಬಹುದು.
WhatsApp No. 8310000414 ಗೆ ಕಳುಹಿಸಬಹುದು.
-
- Sale! Add to basket
- ಕವನ ಸಂಕಲನ (Poetry Collection)
ಚಿಗುರೆಲೆ ಸಂಭ್ರಮ
- Original price was: ₹85.00.₹80.00Current price is: ₹80.00.
-