You are currently viewing ಗಣರಾಜ್ಯೋತ್ಸವ

ಗಣರಾಜ್ಯೋತ್ಸವ

ನಮ್ಮ ದೇಶ ಭಾರತ ತಂದಿರುವುದು ಹಿರಿಮೆ
ನೀಡಿದೆ ನಮ್ಮೆಲರಿಗಿಂದು ಸ್ವಾತಂತ್ರ್ಯದ ಹೆಮ್ಮೆ
ಸಂಸ್ಕೃತಿ ಸಹಧರ್ಮ ನೀತಿಯ ಸಮಾನತೆ
ಸಾರುತಿದೆ ಸಂವಿಧಾನದಿ ಪ್ರಜಾಪ್ರಭುತ್ವತೆ

ಪ್ರಜೆಗಳಿಂದ ಪ್ರಜೆಗಳಿಗಾಗಿ ಪ್ರಜೆಗಳು
ಸಂವಿಧಾನದ ಪ್ರಮುಖವಾದ ತತ್ವಗಳು
ನಮ್ಮೆಲ್ಲರ ಸಮಾನತೆಯ ಶಿಕ್ಷಣ ನೀತಿಯು
ಪ್ರೇರಕವಾಗಿವೆ ಸಂವಿಧಾನದ ಸಂಹಿತೆಯು

ನಮ್ಮ ಮೂಲಭೂತ ಹಕ್ಕುಗಳ ಸೌಕರ್ಯ
ದೇಶದ ಸಂಪನ್ಮೂಲಗಳ ರಕ್ಷಿಸುವ ಕೈಂಕರ್ಯ
ರಾಷ್ಟ್ರ ಧ್ವಜಕೆ ತಲೆ ಎತ್ತಿ ನಮಿಸೋಣ
ರಾಷ್ಟ್ರಗೀತೆಯ ಹಾಡಿ ಗೌರವಿಸೋಣ

ಸ್ವಾತಂತ್ರ್ಯ ಧರ್ಮ ಸಂಸ್ಕೃತಿ ಸಮಾನತೆಗಳು
ಆಗಿಹವು ನಮ್ಮ ಮೂಲಭೂತ ಹಕ್ಕುಗಳು
ನಮ್ಮ ಈ ಸೌಕರ್ಯಗಳಿಗೆ ಶ್ರಮಿಸಿದವರಿಗೆ
ತಲೆಬಾಗಿ ಗೌರವಿಸೋಣ ಆ ಮಹಾಶಯರಿಗೆ

ಬಲಿಷ್ಠರಾಷ್ಟ್ರ ನಿರ್ಮಾಣಕ್ಕೆ ಸಂವಿಧಾನ ರಚನೆ
ಪ್ರಜಾಪ್ರಭುತ್ವ ವ್ಯವಸ್ಥೆಗೆ ಸರ್ಕಾರದ ಮನ್ನಣೆ
ಗಣ್ಯರ ಶ್ರಮದಿಂದಾಯ್ತು ಐತಿಹಾಸಿಕ ಈ ದಿನ
ಗಣರಾಜ್ಯೋತ್ಸವವೆಂಬ ಈ ಸಂತಸದ ಸುದಿನ

ನಳಿನಾ ದ್ವಾರಕನಾಥ್
ಬೆಂಗಳೂರು



ಪ್ರಕಟಣೆಗಾಗಿ ಸಂಪರ್ಕಿಸಿ:

ಇದು ವೆಬ್ ಸೈಟ್ ಮತ್ತು ಯ್ಯಾಪ. ಇದರಲ್ಲಿ ಪ್ರಕಟಣೆಗಾಗಿ ನಿಮ್ಮ ಕವನ, ಕಥೆ, ಪ್ರಬಂಧ, ಲೇಖನ ಹಾಗೂ ಪುಸ್ತಕ ವಿಮರ್ಶೆಗಳನ್ನು ಕಳುಹಿಸಬಹುದು.
WhatsApp No. 8310000414 ಗೆ ಕಳುಹಿಸಬಹುದು.