
ಲೇಖಕರು : ಶರಣಪ್ಪ ತಳ್ಳಿ ಕುಪ್ಪಿಗುಡ್ಡ
ಈಗಾಗಲೇ
ಒಳ-ಹೊರಗಿನ
ಗಾಳಿಯನು ಗುತ್ತಿಗೆ ಪಡೆದಿದ್ದಾರೆ,
ನಮ್ಮ ಗುಡಿಸಲಿನ-
ಹಣತೆಯ ಬೆಳಕು
ಅವರು……
ನುಂಗುವದೆಷ್ಟೊತ್ತು….?
ಯಾರು…ಯಾರವರು..?
ಚುಕ್ಕಿ ಚಂದ್ರಮರ
ನೆರಳ ಕೊರಳಿಗೆ-
ನೋಟಿಸ್ ಕೊಟ್ಟಿದ್ದಾರಂತೆ
ಹೊಳೆ,ಹಳ್ಳ,ಕೊಳಗಳ
ಹಕ್ಕಿಪಿಕ್ಕಿ ಜೀವ ಸಂಕುಲಗಳ
ಝರಾಕ್ಷ್ ಪ್ರತಿ ತೆಗೆಸಿ,
ಹುಟ್ಟು-ಸಾವಿನ ಬೆಳೆಗಾರರೇ ಅವರಾಗಿದ್ದಾರಂತೆ
ಯಾರು…ಯಾರವರು..?
ಗುಡುಗು,ಮಿಂಚಿಗೆ
ಮುತ್ತಿಗೆ ಹಾಕಿ,
ಸಂಚುಗಾರರಾಗಿದ್ದಾರಂತೆ
ಭ್ರಮೆಗೊಳಗಾದ ಮೋಡವು,
ಅರುಣನೆದೆಯ ಕದ ತಟ್ಟಿ-
ತನ್ನಾತ್ಮವನು ತೆರೆದಿಟ್ಟು,
ತನಗೆ ತಾನೆ ತಲೆ ಬೋಳಿಸಿಕೊಂಡಿದೆಯಂತೆ
ನಿದ್ರೆಯಿರದ ಸೂರ್ಯ ನಿಸ್ತೇಜವಾಗಿದ್ದಾನಂತೆ
ಯಾರು…ಯಾರವರು..?
ಕಡಲ ಆಳ,ಅಗಲ,
ವಿಸ್ತಾರವನು ಲೆಕ್ಕ-
ತೆಗೆದುಕೊಂಡಿದ್ದರಂತೆ
ಹಿಮ ಗಿರಿ ಶಿಖರಗಳ ಆಯುವನು-
ನಿಷ್ಕ್ರಿಯಗೊಳಿಸಿ,
ಮೂರ್ತ ಅಮೂರ್ತದ
ಹಂಗನ್ನು ಶೂನ್ಯಗೊಳಿಸಿದ್ದಾರಂತೆ.,
ಕಾಡು,ಗುಡ್ಡ,ಬೆಟ್ಟ ಗವಾರಗಳ ಸಣ್ಣ ಉಸಿರಾಟಕ್ಕೂ ತೆರಿಗೆ ವಿಧಿಸುತ್ತಾರಂತೆ
ಯಾರು…ಯಾರವರು…?
ಸತ್ಯದ ತಲೆಗಳ
ಪ್ರಶ್ನಿಸುವ ಮನಗಳ
ಸಭ್ಯಸ್ಥರ ದಿನಗಳ ಬಾಳನು
ಡಿಲಿಟ್ ಮಾಡುತ್ತಾ….
ಈ ಮಣ್ಣಿನ ಕಣ್ಣೀರು ಹರಿದಂತೆಲ್ಲಾ...ನಿರಂತರ
ನೆಕ್ಕುತ್ತಿರುತ್ತಾರಂತೆ
ಆಗ…….ನಮ್ಮೆಲ್ಲರ ಕಣ್ಣು
ನೆಲ ಬರೆಯುತ್ತವೆ.
ಆಪತ್ಕಾಲದಲಿ
ಸೂಲಗಿತ್ತಿಯು ಸ್ಕಲಿಸಿದ ಹಾಗೆ ಮೆತ್ತಗಿರುತ್ತೇವೆ.
ಯಾರು….ಯಾರವರು..?
ಬಂಡವಾಳಶಾಯಿಗಳು
ರಾಜಕಾರಣಿಗಳು
ಕುಂಟಲಗಿತ್ತೆಯರು
ಶರಣಪ್ಪ ತಳ್ಳಿ ಕುಪ್ಪಿಗುಡ್ಡ
No products were found for this query.
-
ಹೃದಯ ಸಿಂಹಾಸನದಲ್ಲಿ
ಗಜ಼ಲ್ ಸಂಕಲನ (Ghazal collection)₹100.00Original price was: ₹100.00.₹90.00Current price is: ₹90.00.
ಪ್ರಕಟಣೆಗಾಗಿ ಸಂಪರ್ಕಿಸಿ
ಇದು ವೆಬ್ ಸೈಟ್ ಮತ್ತು ಯ್ಯಾಪ. ಇದರಲ್ಲಿ ಪ್ರಕಟಣೆಗಾಗಿ ನಿಮ್ಮ ಕವನ, ಕಥೆ, ಪ್ರಬಂಧ, ಲೇಖನ ಹಾಗೂ ಪುಸ್ತಕ ವಿಮರ್ಶೆಗಳನ್ನು ಕಳುಹಿಸಬಹುದು.
e-mail ವಿಳಾಸ : contact@kannadabookpalace.com
ಅಥವಾ WhatsApp No. 8310000414 ಗೆ ಕಳುಹಿಸಬಹುದು.