೧.
ಸಿದ್ದನಾದನು
ಮಾಹೆ ಪೊರೆ ಕಳಚಿ,
ಬುದ್ಧನಾದಂತೆ.
೨.
ಕಿಸೆಯಲ್ಲದ
ಅಂಗಿ ಧರಿಸಿ ಆತ
ಸನ್ಯಾಸಿಯಾದ !
೩.
ಬಯಲು ಹೂತ್ತಿ
ಬಿತ್ತಿದ ಜ್ಞಾನ ಯೋಗಿ,
ಬೆಳಗು ಸೂರ್ಯ.
೪
ಪ್ರಕೃತಿಯಲಿ
ಭಗವಂತನ ರೂಪ:
ತೋರಿದ ಸಂತ.
೫
ಹೂವಿನಲ್ಲಿಯೂ
ತತ್ವಜ್ಞಾನದ ಸಾರ
ಬೀರಿದ ಜ್ಞಾನಿ.
೬
ಸಂಬಂಧಗಳ
ತೊರೆದು ಜ್ಞಾನ ಜ್ಯೋತಿ
ಹೊತ್ತಿಸಿದಾತ.
೭.
ಮಾತು ಸರಳ
ಎಲ್ಲಾ ದ್ವಂದ್ವಗಳಿಗೂ
ತಾಸು ವಿರಾಮ.
೮
ಮಾತಿನಲ್ಲಿಯೆ
ಜಗದ ನಿಯಮವ
ದರ್ಶಕನೀತ.
೯
ಕೀರ್ತಿಕಳಚಿ
ಮಣ್ಣಿನ ಮೋಹ ಬಿಟ್ಟು;
ಬಯಲಪ್ಪಿದ
೧೦
ಮತಧರ್ಮದ
ನಂಟಿಗಂಟಿಕೊಳ್ಳದಿ
ಸಿದ್ಧೇಶ್ವರರು.
ಗಂಗಾಧರ ಅವಟೇರ
ಶ್ರೀ ಮಹೇಶ್ವರ ಪ.ಪೂ.ಕಾಲೇಜು ಇಟಗಿ
ಪ್ರಕಟಣೆಗಾಗಿ ಸಂಪರ್ಕಿಸಿ:
ಇದು ವೆಬ್ ಸೈಟ್ ಮತ್ತು ಯ್ಯಾಪ. ಇದರಲ್ಲಿ ಪ್ರಕಟಣೆಗಾಗಿ ನಿಮ್ಮ ಕವನ, ಕಥೆ, ಪ್ರಬಂಧ, ಲೇಖನ ಹಾಗೂ ಪುಸ್ತಕ ವಿಮರ್ಶೆಗಳನ್ನು ಕಳುಹಿಸಬಹುದು.
E-Mail ವಿಳಾಸ : Contact@Kannadabookpalace.Com
WhatsApp No. 8310000414 ಗೆ ಕಳುಹಿಸಬಹುದು.