ರಂಗಿನ ಚಿತ್ತಾರದೊಳಗೆ ಬಾಲ ಹೆಜ್ಜೆ ಯಿಟ್ಟವರು
ಮಹಾಶೂರರಂತೆ ಧೀರರಂತೆ ಬೊಬ್ಬಿರಿದು
ಆಬ್ಬರಿಸಿ ತ್ಯಾಗದ ಧೀಮಾಕು ತೋರಿಸುವ
ಢೋಂಗಿ ನಟರೆಲ್ಲರಿಗೆ ಆದರ್ಶವಾಗಬೇಕಾದವರು ರಾಜ್
ಅಧಿಕಾರವೆಂಬುದು ಅರಸಿ ಹಾಸಿಗೆ ಹಾಸಿದರೂ
ನಯವಾಗಿ ಮಾತಿನಲ್ಲಿಯೇ ದೂರ ಸರಿಸಿ
ನಾನು ಕಲ್ಲುಸಕ್ಕರೆ ಯೆಂಬುದನು ತಿಳಿಸಿ
ಸರ್ವರಿಗೆ ಅಪ್ಯಾಯಮಾನವಾದ
ಮಾಣಿಕ್ಯ ರಾಜ್
ಬಾವುಟ ಬೀಸಿ ಬೊಬ್ಬಿರಿಯುವ
ಕನ್ನಡ ಉಳಿವೇ ನನ್ನ ಜೀವನವೆಂದು
ಹಾರಾಡಿ ಹೋರಾಡುವ ನವೆಂಬರ್ ಕನ್ನಡಿಗರಿಗೆ
ಮೌನವಾಗಿ ಚಳುವಳಿ ಮಾಡಿ ಕನ್ನಡದ ಪ್ರತೀಕವಾದವರು ರಾಜ್
ಸ್ವಯಂಘೋಷಿತ ಸಂಘಗಳ ಮೂಲಕ
ಕಾದಾಟ ಹೆಚ್ಚಿಸಿ ಹೆಸರು ಮಾಡುವ ನಿರ್ಮಾಪಕರಿಗೆ ಮೋಸ ಮಾಡುವ
ಮಸಲತ್ತಿನ ಮಂದಿಯೊಳಗೆ ಮುತ್ತಾಗಿ
ಉಳಿದವರು ರಾಜ್
ಅಕ್ಕರದ ಸುಲಲಿತ ಮಂಜುಳ ಧ್ವನಿಯ
ನೋವುಂಡೆ ನಗೆಯ ಹೂ ಚೆಲ್ಲಿದ
ಕಲೆಗೆ ನೆಲೆ ಬೆಲೆಯನು ತೋರಿಸಿ
ಕನ್ನಡನಾಡಿನ ಗೌರವ ಹೆಚ್ಚಿಸಿದ ಕರ್ನಾಟಕ ರಾಜರತ್ನ
ಡಾ. ನಾಹೀರಾ
ಕುಷ್ಟಗಿ
ಪ್ರಕಟಣೆಗಾಗಿ ಸಂಪರ್ಕಿಸಿ:
ಇದು ವೆಬ್ ಸೈಟ್ ಮತ್ತು ಯ್ಯಾಪ. ಇದರಲ್ಲಿ ಪ್ರಕಟಣೆಗಾಗಿ ನಿಮ್ಮ ಕವನ, ಕಥೆ, ಪ್ರಬಂಧ, ಲೇಖನ ಹಾಗೂ ಪುಸ್ತಕ ವಿಮರ್ಶೆಗಳನ್ನು ಕಳುಹಿಸಬಹುದು.
WhatsApp No. 8310000414 ಗೆ ಕಳುಹಿಸಬಹುದು.