ಬೇವು ಬೆಲ್ಲವ ಸೇರಿಸಿ ಹಂಚುತಲಿ
ತಳಿರು ತೋರಣವನು ಕಟ್ಟುತಲಿ
ಆಚರಿಸೋಣ ಯುಗಾದಿ ಹಬ್ಬವನು
ತರುವುದು ಮತ್ತೆ ಹೊಸತನವನು
ಚೈತ್ರದ ಚಿಗುರಿನ ಸೊಬಗಿನಲಿ ಕೋಕಿಲಗಾನ
ಮೈಮನ ತಣಿಸುವ ನವಿಲಿನ ನರ್ತನ
ಹೊಸ ಫಲವು ಹೊಸ ಬೆಳೆ ನವಪರ್ವವು
ನವೋಲ್ಲಾಸ ತುಂಬುತ ವಸಂತನಾಗಮನವು
ಹಬ್ಬದಲ್ಲಿಯೇ ಶ್ರೇಷ್ಠ ಯುಗಾದಿ ಹಬ್ಬವು
ಶ್ರೀರಾಮ ಪಟ್ಟಾಭಿಷೇಕ ನಡೆದ ದಿನವು
ಪೌರಾಣಿಕ ಐತಿಹಾಸಿಕ ಹಿನ್ನೆಲೆಯಿಹುದು
ಶುಭ ಮೂಹೂರ್ತಗಳಲ್ಲೊಂದಾಗಿಹುದು
ಹೊಸ ಬಟ್ಟೆ ತೊಟ್ಟು ನಲಿಯೋಣ
ಸಾಮರಸ್ಯದಿಂದ ಎಲ್ಲರಲಿ ಬೆರೆಯೋಣ
ಚಾಂದ್ರಮಾನ ಯುಗಾದಿ ಹಬ್ಬವದು
ವಸಂತಕಾಲದಿ ಹೊಸತನದಲಿ ಬರುವುದು
ದೀಪಾಲಿ ಸಾಮಂತ
ದಾಂಡೇಲಿ, ಉತ್ತರ ಕನ್ನಡ
ಪ್ರಕಟಣೆಗಾಗಿ ಸಂಪರ್ಕಿಸಿ:
ಇದು ವೆಬ್ ಸೈಟ್ ಮತ್ತು ಯ್ಯಾಪ. ಇದರಲ್ಲಿ ಪ್ರಕಟಣೆಗಾಗಿ ನಿಮ್ಮ ಕವನ, ಕಥೆ, ಪ್ರಬಂಧ, ಲೇಖನ ಹಾಗೂ ಪುಸ್ತಕ ವಿಮರ್ಶೆಗಳನ್ನು ಕಳುಹಿಸಬಹುದು.
E-Mail ವಿಳಾಸ : Contact@Kannadabookpalace.Com
WhatsApp No. 8310000414 ಗೆ ಕಳುಹಿಸಬಹುದು.
ಚೆನ್ನಾಗಿದೆ