ಆಗೊಂದಿತ್ತು ಆಚರಣೆ ಮನೆಮಂದಿಗೆ
ಒಗ್ಗಟ್ಟಿನೊಂದಿಗೆ ಒಬ್ಬಟ್ಟು ಎಲ್ಲರಿಗೆ
ಮಕ್ಕಳಿಂದ ಹಿರಿಯರ ಹುರುಪಿಗೆ
ಬಣ್ಣದ ರೇಷ್ಮೆಯಲ್ಲಿ ಮಿಂಚು ಉಡುಪಿಗೆ
ಪೋಣತಿ ಹಚ್ಚುತ ಅಂಗಳದಿ
ಸುತ್ತಲೂ ಕಾಣುವುದು ಹೊಂಬಣ್ಣದಿ
ಹೂರಂಗೋಲಿ ತಳಿರು ತೋರಣದಿ
ಮಿನುಗುವ ನಕ್ಷತ್ರದಂತೆ ಮನೆಮನದಿ
ಶಬ್ದಗೊಂದಲ ಬೇಡವೆಂದ ಹಿರಿಯರು
ಮಕ್ಕಳ ಕೈಯಲಿ ಕೇವಲ ಚುರ್ ಚುರ್ರ್ಬತ್ತಿಗಳು
ಹಿಂಸೆಯಾಗುವುದು ಹಸುಕರುಗಳಿಗೆ ಮರೆಯದಿರಿ
ಎಂದು ನೀವೆಲ್ಲಾ ಪಟಾಕಿ ಸುಡದಿರಿ
ದೀಪದಿಂದ ಅಜ್ಞಾನವೆಲ್ಲ ತೊಲಗಲಿ
ಕ್ಲೇಶಕಳೆದು ಹರುಷ ತುಂಬಲಿ
ಆರೋಗ್ಯ,ಆಯಸ್ಸು, ನೆಮ್ಮದಿ ದೊರೆಯಲಿ
ದೀಪಾವಳಿ ಹಬ್ಬದಿಂದ ಶುಭವಾಗಲಿ
ಸವಿತಾ ಮುದ್ಗಲ್
ಗಂಗಾವತಿ
ಪ್ರಕಟಣೆಗಾಗಿ ಸಂಪರ್ಕಿಸಿ:
ಇದು ವೆಬ್ ಸೈಟ್ ಮತ್ತು ಯ್ಯಾಪ. ಇದರಲ್ಲಿ ಪ್ರಕಟಣೆಗಾಗಿ ನಿಮ್ಮ ಕವನ, ಕಥೆ, ಪ್ರಬಂಧ, ಲೇಖನ ಹಾಗೂ ಪುಸ್ತಕ ವಿಮರ್ಶೆಗಳನ್ನು ಕಳುಹಿಸಬಹುದು.
WhatsApp No. 8310000414 ಗೆ ಕಳುಹಿಸಬಹುದು.
-
- Sale! Add to basket
- ಕವನ ಸಂಕಲನ (Poetry Collection)
ನೆರಳಿಗಂಟಿದ ಭಾವ
- Original price was: ₹100.00.₹90.00Current price is: ₹90.00.
-
- Sale! Add to basket
- ಕವನ ಸಂಕಲನ (Poetry Collection)
ಮಧುರ ಮೋಹನ
- Original price was: ₹120.00.₹110.00Current price is: ₹110.00.