You are currently viewing ವಿಶ್ವಮತದ ಕುವೆಂಪು

ವಿಶ್ವಮತದ ಕುವೆಂಪು

ಮಲೆನಾಡಿನ ಸೀಮೆಯಲ್ಲಿ ಹುಟ್ಟು
ಕರುನಾಡಿಗೆ ಸಾಹಿತ್ಯಸೇವೆ ಕೊಟ್ಟು
ಸಹ್ಯಾದ್ರಿಯ ಸೌಂದರ್ಯ ಸವಿಯುತ
ಸುಂದರ ಕಾವ್ಯಧಾರೆಯನ್ನು ಹರಿಸುತ

ರಸ ಋಷಿಯಾದರು ಕನ್ನಡದ ಕುವರ
ಭುವಿಯೊಳು ನಿಮ್ಮ ಹೆಸರು ಅಮರ
ಶ್ರೀ ರಾಮಾಯಣ ದರ್ಶನಂ ಬರೆದರು
ಜ್ಞಾನಪೀಠಕ್ಕೆ ಪ್ರಥಮ ಭಾಜನರಾದರು

ಓ ನನ್ನ ಚೇತನ ಆಗು ನೀ ಅನಿಕೇತನ
ನಮ್ಮೀ ನಾಡಿನ ಶ್ರೇಷ್ಠ ಕವಿಗೀ ನಮನ
ವಿಶ್ವಮಾನವ ಸಂದೇಶದ ಅಭಿಯಾನ
ವೈಚಾರಿಕತೆ ನಾಟಕಗಳೊಂದಿಗೆ ಯಾನ

ರಾಷ್ಟ್ರ ಕವಿ ಎಂಬುವ ಬಿರುದಿನಿಂದ
ಕುವೆಂಪು ಎಂಬ ಕಾವ್ಯನಾಮದಿಂದ
ಹೆಸರಾದರು ಕನ್ನಡಮ್ಮನ ಕಂದನಾಗಿ
ಉಸಿರಾಯಿತು ಕನ್ನಡವೇ ಜೀವವಾಗಿ

ಮನುಜಮತ ವಿಶ್ವಪಥದ ಘೋಷಣೆ
ಕನ್ನಡ ಕನ್ನಡಿಗರಿಗೆ ಮೊದಲ ಮನ್ನಣೆ
ಭಾಷೆಯ ಮರೆತವನಾರು ಕನ್ನಡಿಗನಲ್ಲ
ಕನ್ನಡಕ್ಕೆ ನಮಿಸಿ ನಡೆಯಲು ಸೋಲಿಲ್ಲ

ಕವಿಶೈಲವಾಯ್ತು ಜನಿಸಿದ ಕುಪ್ಪಳ್ಳಿಯು
ಕನ್ನಡ ಸಾಹಿತ್ಯದ ಅಗ್ರಮಾನ್ಯ ಕವಿಯು
ಎಲ್ಲಾದರೂ ಇರು ನೀ ಎಂತಾದರೂ ಇರು
ಎಂದೆಂದಿಗೂ ಕನ್ನಡವಾಗಿರೆಂದು ಸಾರಿದರು

ನಳಿನಾ ದ್ವಾರಕನಾಥ್
ಬೆಂಗಳೂರು


ಪ್ರಕಟಣೆಗಾಗಿ ಸಂಪರ್ಕಿಸಿ:

ಇದು ವೆಬ್ ಸೈಟ್ ಮತ್ತು ಯ್ಯಾಪ. ಇದರಲ್ಲಿ ಪ್ರಕಟಣೆಗಾಗಿ ನಿಮ್ಮ ಕವನ, ಕಥೆ, ಪ್ರಬಂಧ, ಲೇಖನ ಹಾಗೂ ಪುಸ್ತಕ ವಿಮರ್ಶೆಗಳನ್ನು ಕಳುಹಿಸಬಹುದು.
WhatsApp No. 8310000414 ಗೆ ಕಳುಹಿಸಬಹುದು.