You are currently viewing ಹಾಯ್ಕುಗಳು

ಹಾಯ್ಕುಗಳು


ಅಳಿಸಿ ಹೋದ
ವಿಶ್ವಾಸ ಗಳಿಸಲು
ಜೀವನ ತ್ಯಾಗ.

ಇವಳು ಸದಾ
ಹೊಳೆಯಂತೆ ;ಆಗೀಗ
ವ್ಯಗ್ರ ವಾರಿದಿ

ಬದುಕು ಕಲೆ
ಅರಿತವನ ಮನ:
ಪೂರ್ಣಿಮೆ ಚಂದ್ರ.

ಕತ್ತಲೆಯಲ್ಲಿ
ನಡೆಯುವವನಿಗೆ
ಸೂರ್ಯ ಆಸರೆ.

ಸಾಹಿತ್ಯದಲ್ಲಿ
ಜನ ಹಿತ ಇಲ್ಲದ್ದು
ಬರಹ ಶುಷ್ಕ.

ನಲ್ಲೆ ನಿನ್ನನ್ನು
ನೋಡಿದಾಗೋಮ್ಮೆ ಮನೆ
ನಲ್ಲಿ ನೆನೆಪು.

ಚಳಿಗಾಲದ
ಹೋತ್ನಲ್ಲಿ ಮೆತ್ತನೆಯ
ಕೌದಿಗೂ ಬೆಲೆ !

ಸಂಬಂಧಗಳೆ
ಹಳಸದಿರಿ ನೀವು
ಹುಣಸೆಯಂತೆ.!

ಹೆತ್ತವ್ವ ನಿನ
ಹಾಡು ಹೊಕ್ಕಳ ಬಳ್ಳಿ
ಹೂವು ನಕ್ಹಾಂಗ.
೧೦
ಮಕ್ಕಳ ನಗು
ನೋಡಿ ಮಂದಾರ ಹೂವು
ನಾಚಿ ನೀರಾತು.!
೧೧
ರಾಜಕಾರಣಿ
ಆಡಿದ ಮಾತು ಕೇಳಿ
ನಕ್ಕಿತು ಸತ್ಯ.!

ಗಂಗಾಧರ ಅವಟೇರ
ಇಟಗಿ/ ಮಹಾಲಿಂಗಪುರ