೧
ಭಾವನೆ ಶುದ್ದ;
ವಿದ್ದರೆ ಭಾಗ್ಯ ಮನೆ
ಬಾಗಿಲಿನಲ್ಲಿ.
೨
ಜೀವನ ಸ್ವಚ್ಛ; ತತ್ವ
ವಿಡಲು ಶರಣರ
ವಚನ ಬೇಕು.
೩
ಜೀವನ ಟ್ರೇನ್
ಓಡಿಸಲು ಬೇಕೊಂದೆ
ಆತ್ಮಬಲವು.
೪
ಮಾತಾಡು ನಲ್ಲೆ
ಕತ್ತಲೆಯ ಬಾಳಲ್ಲಿ,
ಹೊತ್ತೀತು ದೀಪ್ತಿ.
೫
ನಲ್ಲೆಯ ಗಲ್ಲ
ಬೆಲ್ಲದ ಅಚ್ಚು; ಸವಿ
ಮುತ್ತಿಗೆ ಮೆಚ್ಚು.
೬
ಅಂಗದ ಮೇಲೆ
ಲಿಂಗ ಧರಿಸಿ ಸತಿ;
ಲಿಂಗವೇ ಪತಿ
೭
ಕಾವಿ ತೊಟ್ಟವ
ಜಗದ್ಗುರು ಆಗಲ್ಲ;
ಗೆಲ್ಲು ವಾಸನೆ
೮
ಒಲವೇ ನಿನ್ನ
ಸ್ನೇಹ ಎಷ್ಟು ಮಧುರ
ಅಮೃತ ಸವಿ.
೯
ಅವಮಾನವೇ
ನೀನು ಕಠೋರ;ನೇಣ
ಕೊರಳ ಮಾಲೆ
೧೦
ನೀ ಬರುವುದ
ಕಾದಿರುವೆ ನಾ ಸಖಿ
ನೀ ಚಂದ್ರಮುಖಿ.
೧೧
ಅನುಭಾವವು
ಆಲದ ಮರವಾಗಿದೆ;
ಸಾಹಿತ್ಯ ಫಲ.!
ಗಂಗಾಧರ ಅವಟೇರ
ಇಟಗಿ/ಮಹಾಲಿಂಗಪುರ