You are currently viewing ಕಲಿಯುಗದ ಸೃಷ್ಟಿ

ಕಲಿಯುಗದ ಸೃಷ್ಟಿ

ಬ್ರಹ್ಮದೇವರು ಮಂಗಳವೆನಿಸಿ ಸೃಷ್ಟಿಸಿದ ದಿನ
ಶ್ರೀ ವಿಷ್ಣುದೇವನು ಯುಗಗಳನ್ನಾಳುತ್ತ
ಕಲಿಯುಗಕ್ಕೆ ಆರಂಭ ನೀಡಿದ ದಿನ
ಶ್ರೀ ಕೃಷ್ಣನಡಿಯಿಂದಲೆ ಬಂತು ಯುಗಾದಿ ಹಬ್ಬದ ದಿನ

ಭಾರತಾದ್ಯಂತ ಅವರವರ ಸಂಸ್ಕೃತಿಯಂತೆ
ಮನೆಯ ಸ್ವಚ್ಚತೆಯಲಿ ಮನವು ಶುಚಿಗೊಳಿಸುತ್ತ
ಹೊಸ ಉತ್ಸಾಹ ಚೈತನ್ಯ ಭಾವದಲ್ಲಿ ಮೊಳಗುತ್ತ
ವರ್ಷದಲೊಮ್ಮೆ ಬ್ರಹ್ಮ ದೇವನನ್ನು ನಮಿಸುವ ದಿನ

ಆದಿಯ ಮೂಲವಾಗಿ ಶಿವನನ್ನು ನಂಬಿ
ಸೂರ್ಯ ಚಂದ್ರನ ಸೌರವವನ್ನು ಕಂಡು
ಇಷ್ಟ ದೇವತೆಗಳ ಪೂಜೆಯ ಮಾಡುವ
ಹಿಂದೂ ಸಂಪ್ರದಾಯಕವಾದ ದಿನ

ಗಣಿತಜ್ಞರಾದ ಭಾಸ್ಕರಾಚಾರ್ಯರು
ಪ್ರಸ್ತುತ ಪಡಿಸಿದ ಚೈತ್ರ ಮಾಸದ ದಿನ
ವಸಂತಕಾಲದ ಚಿಗುರುವ ಪ್ರಕೃತಿಯ ಸಿರಿಯಲ್ಲಿ
ಹೊಸವರ್ಷದಾರಂಭ ನೀಡಿರುವ ದಿನ

ಮಾವು ಉಪ್ಪು ಖಾರ ಬೇವು ಬೆಲ್ಲದಂತೆ
ಕಹಿ ಘಟನೆ ದುಃಖ ನೋವು ಮರೆತು
ಸಿಹಿ ಸಂಭ್ರಮ ಸಂತೋಷ ಹಂಚಿಕೊಳ್ಳುತ್ತ
ಆಚರಿಸುವ ಚಂದ್ರಮಾನ ಯುಗಾದಿ ಹಬ್ಬ

ಸಂತೋಷ ವಿ.ಪಿಶೆ
ಹಾವೇರಿ


ಪ್ರಕಟಣೆಗಾಗಿ ಸಂಪರ್ಕಿಸಿ:

ಇದು ವೆಬ್ ಸೈಟ್ ಮತ್ತು ಯ್ಯಾಪ. ಇದರಲ್ಲಿ ಪ್ರಕಟಣೆಗಾಗಿ ನಿಮ್ಮ ಕವನ, ಕಥೆ, ಪ್ರಬಂಧ, ಲೇಖನ ಹಾಗೂ ಪುಸ್ತಕ ವಿಮರ್ಶೆಗಳನ್ನು ಕಳುಹಿಸಬಹುದು.
WhatsApp No. 8310000414 ಗೆ ಕಳುಹಿಸಬಹುದು.