ಯುಗ ಯುಗ ಕಳೆದರೂ ಯುಗಾದಿ ಬರುತ್ತಲೇ ಇರುತ್ತದೆ
ನಶ್ವರ ಎಂಬುವುದ ಅದು ಕಾಣದು
ಚಿರಂಜೀವಿ ಯುಗಾದಿಗೆ ಸ್ವಾಗತ
ಮನುಷ್ಯ ಹುಟ್ಟುತ್ತಾನೆ
ಹುಟ್ಟಿ ಸಾಯುತ್ತಾನೆ
ಜೀವನವೆಂಬೂ ಯಾನದಲ್ಲಿ
ಯುಗಾದಿ ಅವನಿಗೊಂದಿಷ್ಟು ಗಾದಿಗಳನ್ನು
ಕೊಟ್ಟು ಉತ್ಸಾಹ ತುಂಬುತ್ತದೆ
ಯುಗಾದಿ ಮರೆಯಾಗುತ್ತದೆ
ಹಳೆಯದನ್ನು ನೆನಪಾಗಿಟ್ಟು
ಹೊಸದರತ್ತ ಪಯಣಿಸುತ್ತದೆ
ಗಡಿಯಾರದ ಮುಳ್ಳಿನಂತೆ
ಯುಗಾದಿ ಬೇವು-ಬೆಲ್ಲಗಳ ಮಿಶ್ರಣದ
ಸುಖ ಬರಿ ಬೇವೂ ಬೇಡ
ಸದಾ ಸಿಹಿಯೂ ಬೇಡ
ಒಂದರರೊಳಗೊಂದು ಇದ್ದರೆ ಜೀವನ ಪಾವನ
ಅಂತಹ ಸಮ್ಮಿಶ್ರಣ ಯುಗಾದಿ
ಯುಗಾದಿಗೆ ಶುಭಶಕುನ ನುಡಿಯುತ್ತಾರೆ
ಹೊಸ ಉಡುಗೆ-ತೊಡುಗೆಗಳು ಲಬ್ಬಿಸುತ್ತವೆ
ನೆಂಟರಿಷ್ಟರು ಆಗಮಿಸುವ ಸಂಭ್ರಮ
ನವವಸಂತ ನೀಡುವನು ಪ್ರಕೃತಿಗೆ
ಹೊಸ ಚಿಗುರು ಹೊಸ ಉಸಿರು
ತುಂಬುವನು ಹಚ್ಚನೆಯ ಹಸಿರು
ಬಿರುಬಿಸಿಲಲಿ ಬೆವರು ಹರಿದರೂ
ಮದುವೆ ದಿಬ್ಬಣ ಹೊತ್ತು ಬರುವ
ಹಳೆಯ ಲೆಖ್ಖ ತುಲನೆಮಾಡಿ
ಹೊಸ ವ್ಯವಹಾರಕೆ ಮುನ್ನುಡಿ
ಬರೆವ ಆ ಯುಗಾದಿಗೆ ಸ್ವಾಗತ
ಪಂಚಾಂಗದ ಭವಿಷ್ಯ ಪಲುಕಿ
ವರ್ಷದಡುಕ ಭೋಜನಪ್ರಿಯ
ಜಾತ್ರೆ-ಹರಕೆ, ನದಿ-ಜಳಕ,
ಮೋಜು-ಮಸ್ತಿ, ಕುಸ್ತಿಯಾಟ
ಆಡಿಸುವ ಯುಗಾದಿಗೆ ಸ್ವಾಗತ
ರತ್ನ ನಾಗರಾಜ್
ವಿಜಯ ಕಾಲೇಜು
ಆರ್ ವಿ ರಸ್ತೆ ಬಸವನಗುಡಿ
ಬೆಂಗಳೂರು
ಪ್ರಕಟಣೆಗಾಗಿ ಸಂಪರ್ಕಿಸಿ:
ಇದು ವೆಬ್ ಸೈಟ್ ಮತ್ತು ಯ್ಯಾಪ. ಇದರಲ್ಲಿ ಪ್ರಕಟಣೆಗಾಗಿ ನಿಮ್ಮ ಕವನ, ಕಥೆ, ಪ್ರಬಂಧ, ಲೇಖನ ಹಾಗೂ ಪುಸ್ತಕ ವಿಮರ್ಶೆಗಳನ್ನು ಕಳುಹಿಸಬಹುದು.
WhatsApp No. 8310000414 ಗೆ ಕಳುಹಿಸಬಹುದು.