You are currently viewing ಬಂತು ಬಂತು ಯುಗಾದಿ ಹಬ್ಬ

ಬಂತು ಬಂತು ಯುಗಾದಿ ಹಬ್ಬ

ಪಾಲ್ಗುಣ ಮಾಸದ ನಿರ್ಗಮನ
ನವ ಚೈತ್ರ ಮಾಸದ ಆಗಮನ
ಮಾಮರದಿ ಕೋಗಿಲೆಯ ಗಾನ
ಹಿಂದುಗಳ ಹೊಸ ವರ್ಷದ ಜನನ

ಬಾಗಿಲಿಗೆ ಮಾವಿನ ತೋರಣ
ಸಿಹಿ ಬೆಲ್ಲ ಬೆಳೆಯ ಹೂರಣ
ಸಿಹಿ ಮಾವು ಕಹಿಬೇವಿನ ಮಿಶ್ರಣ
ವರ್ಷದ ಮೊದಲ ಹಬ್ಬದ ಸಂಭ್ರಮಣ

ಬಂಧು ಬಾಂಧವರೆಲ್ಲ ಬೆರೆಯೋಣ
ಬದುಕಿನ ಕಹಿಯನ್ನೆಲ್ಲ ಮರೆಯೋಣ
ಸವಿ ನೆನಪಿನ ಸಿಹಿ ಎಲ್ಲೆಡೆ ಸಾರೋಣ
ನವಯುಗ ಒಂದನ್ನು ಸೃಷ್ಟಿಸೋಣ

ಗೆಳೆಯ ಗೆಳತಿಯರೆಲ್ಲಾ ಸೇರೋಣ
ಎಳೆಯ ಬಾಲ್ಯದ ಬುತ್ತಿ ಬಿಚ್ಚೋಣ
ಸ್ನೇಹದ ಸಾರವ ಎಲ್ಲೆಡೆ ಹಂಚೋಣ
ಸ್ನೇಹ ಪಾಶದಿ ಬಂದಿಯಾಗೋಣ

ಭವಿಷ್ಯದ ಪಂಚಾಂಗ ನೋಡೋಣ
ಹಳೆಯ ಕೊಳೆಯನ್ನು ತೊಳೆಯೋಣ
ಎಲ್ಲೆಲ್ಲೂ ಹೊಸ ಕಳೆ ತುಂಬೋಣ
ಹರ್ಷದ ಹೊನಲನ್ನು ಹೆಣೆಯೋಣ

ಅಕ್ಕರೆಯಿಂದ ಮಕ್ಕಳಿಗೆ ಕರೆಯೋಣ
ಸಕ್ಕರೆಯ ಸರವನ್ನು ಹಾಕೋಣ
ಬಾಳ ಸಿಹಿಯಾಗಲೆಂದು ಹರಸೋಣ
ಯುಗಾದಿ ಹಬ್ಬವ ಆಚರಿಸೋಣ

ಮಹಡಿಯನ್ನು ಏರಿ ಪೂಜಿಸೋಣ
ಗುಡಿ ಪಾಡವಾ ದೇವಿಗೆ ಸ್ಮರಿಸೋಣ
ಸುಖಸಮೃದ್ಧಿ ಕೊಡೆಂದು ಕೇಳೋಣ
ದೇವಿಗೆ ಬಾಗಿನಕೊಟ್ಟು ಕಳಿಸೋಣ

ಎರಡೇತ್ತಿನ ಬಂಡಿಯ ಹೂಡೋಣ
ಮೇಲೆ ಮುತ್ತಿನ ಚಪ್ಪರ ಹಾಕೋಣ
ರತ್ನದ ಗಂಬಳಿಯ ಹಾಸೋಣ
ಓಣಿ ಹೆಂಗಳೆಯರೆಲ್ಲ ಕೂಡೋಣ

ಜೋಳದ ಗೂಡನ್ನು ಮುರಿಯೋಣ
ಕುಣಿಯುತ ರಾಶಿಯು ಮಾಡೋಣ
ಅನ್ನದಾತ ರೈತನಿಗೆ ಹರಸೋಣ
ಈ ಯುಗಾದಿ ಹಬ್ಬವ ಸ್ಮರಿಸೋಣ

ಹಿಂದಿನ ಸಂಸ್ಕೃತಿ ಮರೆಯದಿರೋಣ
ಮುಂದಿನ ಪೀಳಿಗೆಗೆ ಹೇಳಿ ಕೊಡೋಣ
ಸನಾತನ ಹಬ್ಬ ಹರಿದಿನವ ಆಚರಿಸೋಣ
ಹಿರಿಯರಿಗೆ ಗೌರವ ಕೊಡುವುದು ಕಲಿಸೋಣ
ಈ ಯುಗಾದಿ ಹಬ್ಬವ ಸ್ಮರಿಸೋಣ ಸ್ಮರಿಸೋಣ…

ಶಿವಲೀಲಾ .ಎಸ್ .ಧನ್ನಾ
ಕಲ್ಬುರ್ಗಿ ಕಲ್ಯಾಣ ಕರ್ನಾಟಕ


ಪ್ರಕಟಣೆಗಾಗಿ ಸಂಪರ್ಕಿಸಿ:

ಇದು ವೆಬ್ ಸೈಟ್ ಮತ್ತು ಯ್ಯಾಪ. ಇದರಲ್ಲಿ ಪ್ರಕಟಣೆಗಾಗಿ ನಿಮ್ಮ ಕವನ, ಕಥೆ, ಪ್ರಬಂಧ, ಲೇಖನ ಹಾಗೂ ಪುಸ್ತಕ ವಿಮರ್ಶೆಗಳನ್ನು ಕಳುಹಿಸಬಹುದು.
WhatsApp No. 8310000414 ಗೆ ಕಳುಹಿಸಬಹುದು.