You are currently viewing ಕಾಯಕ ಅಂದರೆ ತಂತ್ರ ಅಲ್ಲ.

ಕಾಯಕ ಅಂದರೆ ತಂತ್ರ ಅಲ್ಲ.

ಅಣ್ಣ ಬಸವಣ್ಣ ಇವರು ಎಲ್ಲರಿಗು ಜಾಗೃತಿ ಮೂಡಿಸುವ ಕೆಲಸವನ್ನು ಮಾಡಿ ಇತರರಿಗೆ ಮಾದರಿಯಾಗಿ ಕಾಣಿಸುತ್ತಾರೆ. ನಮ್ಮ ದೇಹದಂತೆ ಜೀವನ ಜೀವ ತಾಳೆ ಹಾಕಿ ನೋಡು ಗುಣ ಬೇಕೂ. ನಮ್ಮ ನಾಲಿಗೆಗೆಯಿಂದ ಹೊರಡುವ ಪ್ರತೀ ಮಾತು ಕೇಳಿ ಮನ ಅರಳಬೇಕು. ನಾಲಿಗೆ ಲೇಖನಿಗಿಂತ ಹರಿತ ಮಾತು ಆಡಿದರೆ ಹೋಯಿತು ಮುತ್ತು ಒಡೆದರೆ ಹೋಯಿತು. ನಮ್ಮ ಮಾತು ಇನ್ನೊಬ್ಬರಿಗೆ ಹಿತ ಮಿತ ಪ್ರಮಾಣದಲ್ಲಿ ಇದ್ದರೆ ಮಾತ್ರ ದೇಶ ಉತ್ತಮ ಗುಣ ಮಟ್ಟದ ಯೋಜನೆಯ ರೂಪಿಸುವ ನಿಟ್ಟಿನಲ್ಲಿ ಕೆಲಸ ಮಾಡುವ ಅವಕಾಶ ನೀಡಿದಂತೆ. ನಾಲಿಗೆ ಒಳ್ಳೆಯದಾದರೆ ನಾಡೆಲ್ಲ ಒಳ್ಳೆಯದು.

ದೇಶ ಉತ್ತಮ ಆರೋಗ್ಯಕರ ಸಮಾಜ ನಿರ್ಮಾಣ ಸಾಧ್ಯವಾಗಲೂ ನಮ್ಮ ನಾಲಿಗೆ ಇಂದ ಹೊರಡುವ ಮಾತೆ ಮುಖ್ಯ. ಮಾತೇ ಮಾಣಿಕ್ಯ ಕೊಟ್ಟ ಕೆಲಸವನ್ನು ಮಾಡಿದ್ರೆ ಯಾವತ್ತೋ ಒಂದು ದಿನ ನಮ್ಮ ಶ್ರಮಕ್ಕೇ ಬೆಲೆ. ಕಾಯಕ ಅಂದರೆ ನೂರು ವರ್ಷಗಳ ಹಿಂದೆ ಬ್ರಾಹ್ಮಣ್ಣ, ವ್ಯಶ, ಕ್ಷತ್ರಿಯ, ಶೂದ್ರ ವರ್ಣ ಸಮಾಜ ನಿರ್ಮಾಣವಿತ್ತು. ಗೌರವ ನಂಬಿಕೆ ಕಾಯಕ ನಿಷ್ಟ ಇತ್ತೆ. ನಮ್ಮ ಅಣ್ಣ ಬಸವಣ್ಣನಿಂದಾಗಿ ಸಕಲ ಜೀವ ಜೀವಿಗಳಿಗೆ ಮಾನ್ಯತೆ ನೀಡಿ ರೂಪಿಸಲಾದ ಜೀವಿ ಅವರೂ.

ಅಣ್ಣ ಬಸವಣ್ಣ ಕಾಯಕ ಅಂದರೆ ಹಣ ಗಳಿಸುವ ಅಧಿಕಾರ ಅಂತಸ್ತು ಗಳಿಸಲು ಹೆಣಗಾಡುವ ಪರಿ ಅಲ್ಲ. ಹೆಣ್ಣು ಹೊನ್ನು ಮಣ್ಣು ಗಳಿಕೆ ಬಳಕೆ ಉಳಿಕೆ ಅಲ್ಲ. ಒಬ್ಬರನ್ನು ತುಳಿದು ಬದುಕುವುದು ಕಾಯಕ ಅಲ್ಲ. ಅನ್ನದಾತ ನಿಜವಾದ ಕಾಯಕ ಯೋಗಿ. ಪರರಿಗೆ ಉಪಕಾರ ಮಾಡುವದು ಹೇಗೆ ಸಾಧ್ಯ ಎಂಬ ಸಂದೇಶ ರವಾನೆ ಈ ಎಲ್ಲ ಬಗೆಯ ಸಂಗತಿ ತಿಳಿಸಿದೆ. ಕಾಯಕದ ಮೇಲೆ ಅವರ ನೈಜ ಚಿತ್ರಣ ಇರುವ ಜಾಗ ಸದಾ ನಮ್ಮನ್ನು ಸರಿ ದಿಕ್ಕಿನಲ್ಲೇ ಮುನ್ನಡೆಸುವ ಅವಕಾಶ ನೀಡಿದಂತೆ.

ನಮ್ಮ ಕಣ್ಣು ದೇಹದ ಮಹತ್ವ ಅರಿತಿರುವ ಮತ್ತು ಗುರಿ ತಲುಪಲು ಸಾಧ್ಯ ಎಂದು ಆರಂಭವಾಗುವ ಈ ಎಲ್ಲ ಬಗೆಯ ಸಂಗತಿ ತಿಳಿಸಿ ಸರಳ ರೀತಿಯಲ್ಲಿ ಕೆಲಸ ಮಾಡುವ ರೀತಿ ನಿಜಕ್ಕೂ ಸವಾಲಿನ ಕೆಲಸವಾಗಿತ್ತು. ಕೆಟ್ಟ ಕೆಲಸ ಅಂದರೆ ಹಣ ಅಧಿಕಾರ ಅಂತಸ್ತು ಗಳಿಸಲು ಯಾವ ಬಾಗಿಲು ತೆರೆದು ನೋಡಿ ಸೋಮಾರಿತನದಿಂದ ಮತ್ತು ಜೀವನಕ್ರಮವನ್ನು ಉತ್ತಮಗೊಳಿಸಲು ನಮ್ಮ ದೇಶದ ಚುಕ್ಕಾಣಿ ಹಿಡಿದು ಬಾಗಬೇಕು.

ರಾಜೇಂದ್ರ ಹೆಗಡೆ 
Mo ೮೩೧೦೩೮೪೫೪೦
ರಾಮ ಕೃಷ್ಣ ಕುಟೀರ ವಿನಾಯಕ ನಗರ ಡಿ ಸಿ ಆಫೀಸ್ ರಸ್ತೆ
ನೀರಾವರಿ ಇಲಾಖೆ ಹತ್ತಿರ ಹಾವೇರಿ ೫೮೧೧೧೦.









Leave a Reply