ಬಾನಲಿ ಹಾರಾಡಿದ ಏರ್ ಇಂಡಿಯಾ ವಿಮಾನ
ವೈದ್ಯಕೀಯ ಹಾಸ್ಟೆಲ್ ನ ಮೇಲಾಯ್ತು ಪತನ
ಎಷ್ಟೋ ಜೀವಗಳಾಯ್ತು ಸಜೀವ ದಹನ
ತಾಂತ್ರಿಕ ದೋಷವೋ ಸೈಬರ್ ದಾಳಿಯೋ ತಿಳಿಯದಾಯ್ತು ಕಾರಣ
ಏನೂ ಅರಿಯದ ಮುದ್ದು ಕಂದಮ್ಮಗಳು
ಸಾವಿರ ಕನಸು ಹೊತ್ತ ಅದೆಷ್ಟೋ ಕಂಗಳು
ತನ್ನವರ ಕಳೆದುಕೊಂಡ ಸಂತ್ರಸ್ತ ಕುಟುಂಬಗಳು
ವಿಧಿಯ ಆಟಕೆ ಸಿಲುಕಿದ ನತದೃಷ್ಟ ಜೀವಗಳು
ಭಸ್ಮವಾಯಿತು ಆಶಾ ಗೋಪುರ
ಛಿದ್ರವಾಯಿತು ಹೊಂಗನಸುಗಳ ಸಾಗರ
ಮಣ್ಣಿನ ಋಣ ತೀರಿ ಕಾಲನ ಕರೆ ಬಂದಿತು
ಘೋರ ದುರಂತಕ್ಕೆ ಸಾಕ್ಷಿಯಾಯಿತು
ಓ ಪ್ರಕೃತಿಯೇ ನೀನೆಷ್ಟು ವಿಸ್ಮಯ
ಜನಗಳಲಿ ಮೂಡಿಸಿದೆ ಬದುಕಿನ ಭಯ
ಉಷಾ ಪ್ರಶಾಂತ್
ಸಿದ್ದಾಪುರ