ಹನ್ನೆರಡನೆಯ ಶತಮಾನದಲ್ಲಿ
ಜನಿಸಿದ ತತ್ವಜ್ಞಾನಿ ಬಸವಣ್ಣ ನೀನು
ಇಪ್ಪತ್ತೊಂದನೆಯ ಶತಮಾನದಲ್ಲಿ
ಜನಿಸಿದ ತಂತ್ರಜ್ಞಾನ ಯುಗದ ನಾವೆಲ್ಲಿ
ಲೋಕದ ಉದ್ಧಾರದ ಭಕ್ತಿ
ಚಳುವಳಿಯ ಹರಿಕಾರ ನೀನೆಲ್ಲಿ
ನಮ್ಮ ಮನೆಯಲ್ಲಿಯೇ ಭಕ್ತಿ ಸಾರ
ತುಂಬದ ನಾವೆಲ್ಲಿ
ವಿಶ್ವಕ್ಕೆ ಗುರುವಾದವ ಬಿಜ್ಜಳನ ಆಸ್ಥಾನಕ್ಕೆ
ಆಧಾರವಾದವನು ನೀನೆಲ್ಲಿ ಬರೀ
ಬಂದು ಬಳಗ ಅಕ್ಕ ತಮ್ಮ ಅಣ್ಣ ತಂಗಿ
ನಮ್ಮವರು ಅನ್ನೋದಕ್ಕೂ ಹಿಂಜರೆಯುವ ನಾವೆಲ್ಲಿ
ಅಂದು ವಚನಗಳ ಜಾಡಿನಲ್ಲಿ ಮೌಢ್ಯತೆ
ಕಳೆದು ಸಾಮಾಜಿಕ ಅರಿವು ಮೂಡಿಸಿದವನು ನಿನೆಲ್ಲಿ
ಜಂಗಮವಾಣಿಯೆಲ್ಲಿಯೇ ಮಿಂದೆದ್ದು
ಜೀವನವನ್ನೇ ಜಂಗುಹಿಡಿಸಿಕೊಂಡವರು ನಾವೆಲ್ಲಿ
ಜಾತಿ ಮತ ಲಿಂಗ ಬೇದಗಳ ತಿರಸ್ಕರಿಸಿದ
ಸಮಾನತೆಯ ಜ್ಯೋತಿ ಬೆಳಗಿದ ವಿಶ್ವಗುರು ನೀನೆಲ್ಲಿ
ಮನದಲ್ಲಿಯೇ ಹುಳುಕು ಕೊಳಕು ಚಿಂತನೆಗಳ
ಅಡಗಿಸಿ ಕೊಂಕನಾಡುತ ಮೆರೆವ ನಾವೆಲ್ಲಿ
ಅಣ್ಣಾ ಅಂದು ನೀವು ನಡೆದು ಬಂದ
ಹಾದಿಯಲ್ಲಿ ಇಂದು ನಡೆಯುದನ್ನು ಕಲಿಸಿಕೊಡಿ
ಮಾನವ ಧರ್ಮ ಒಂದೇ ಮಾನವ ಧರ್ಮಕ್ಕೆ
ಜಯವಾಗಲಿ ಎನ್ನೋದನ್ನು ಮೊಳಗಿಸಿಬಿಡಿ.
ಸಿಎಂಐ…
ಪ್ರಕಟಣೆಗಾಗಿ ಸಂಪರ್ಕಿಸಿ:
ಇದು ವೆಬ್ ಸೈಟ್ ಮತ್ತು ಯ್ಯಾಪ. ಇದರಲ್ಲಿ ಪ್ರಕಟಣೆಗಾಗಿ ನಿಮ್ಮ ಕವನ, ಕಥೆ, ಪ್ರಬಂಧ, ಲೇಖನ ಹಾಗೂ ಪುಸ್ತಕ ವಿಮರ್ಶೆಗಳನ್ನು ಕಳುಹಿಸಬಹುದು.
WhatsApp No. 8310000414 ಗೆ ಕಳುಹಿಸಬಹುದು.
ಇದನ್ನೂ ಓದಿ: ಗಾಂಧಿ ನೇಯ್ದಿಟ್ಟ ಬಟ್ಟೆ
ಈಗಲೇ ವಾಟ್ಸಾಪ್ ಚಾನೆಲ್ ಫಾಲೋ ಮಾಡಿ: ಕ್ಲಿಕ್ ಮಾಡಿ