You are currently viewing ಜಗಜ್ಯೋತಿ ಬಸವಣ್ಣ

ಜಗಜ್ಯೋತಿ ಬಸವಣ್ಣ

ಮಠ ಮಂದಿರ ಹಾರ ಹರಕೆ
ಇವು ದೇವರು ಕಾಣುವ ದಾರಿ ಅಲ್ಲ
ನಿನ್ನ ಹೃದಯದ ಶುದ್ಧ ನಡಿಗೆ
ಅದರಲ್ಲಿ ಒಡಲಾಳದ ದೈವ ಅಲ್ಲವೆ?

ಲಿಂಗವ ಹೊತ್ತು ಲೋಕ ತೋರಿದರೆ
ಸತ್ಯವ ಬಾಳಲ್ಲಿ ಹರಡಬೇಕೆ?
ಸತ್ಯವಿಲ್ಲದ ನಡೆ ಧರ್ಮವ ದೂಷಿಸು
ಶ್ರಮವೇ ಶ್ರೇಷ್ಠ ಪೂಜೆಯೆಂಬ ನುಡಿ

ಜಾತಿಯ ಬೀಜ ಭಕ್ತಿಯಲ್ಲಿ ಬೆಳೆದು
ಅಪವಿತ್ರ ಮಾಡಿದ ಭಾವದ ಬೀಡು
ಬಸವಣ್ಣನು ಕಟ್ಟಿದ ಶರಣ ಸಂಸಾರ
ಸಮಾನತೆಯ ಹೂವಿನಿಂದ ತುಂಬಿತು

ವಚನವೆಂಬ ವೃಕ್ಷ ಹಸಿ
ಅನುಭವವೆಂದರೆ ಅದರ ಬೇರಿನ ಶಕ್ತಿ
ಅದು ನಾವೆಲ್ಲರ ಮನದಲಿ ಬೆಳೆದು
ಜಗವ ಬದಲಾಯಿಸಬಲ್ಲ ಬೆಳಕು

ಪಾಂಡಿತ್ಯವಲ್ಲ, ಶುದ್ಧ ಮನಸ್ಸು
ಆಡಂಬರವಲ್ಲ, ಪ್ರಾಮಾಣಿಕ ನಡೆಯಲಿ
ಬಸವಣ್ಣ ನುಡಿದ ನುಡಿಗಳಲಿ
ಬದುಕು ರೂಪುಗೊಳ್ಳಲಿ ಶರಣರ ಬೆಳಕಾಗಿ

ಬಸವ ವಿನಯ್(ವಿಪಿ)


ಪ್ರಕಟಣೆಗಾಗಿ ಸಂಪರ್ಕಿಸಿ:

ಇದು ವೆಬ್ ಸೈಟ್ ಮತ್ತು ಯ್ಯಾಪ. ಇದರಲ್ಲಿ ಪ್ರಕಟಣೆಗಾಗಿ ನಿಮ್ಮ ಕವನ, ಕಥೆ, ಪ್ರಬಂಧ, ಲೇಖನ ಹಾಗೂ ಪುಸ್ತಕ ವಿಮರ್ಶೆಗಳನ್ನು ಕಳುಹಿಸಬಹುದು.
WhatsApp No. 8310000414 ಗೆ ಕಳುಹಿಸಬಹುದು.

ಇದನ್ನೂ ಓದಿ: ಗಾಂಧಿ ನೇಯ್ದಿಟ್ಟ ಬಟ್ಟೆ
ಈಗಲೇ ವಾಟ್ಸಾಪ್ ಚಾನೆಲ್ ಫಾಲೋ ಮಾಡಿ: ಕ್ಲಿಕ್ ಮಾಡಿ