ಬಸವನೆಂದರೆ ಮನದ ವ್ಯಸನ ಕಳೆದ ಮಹಿಮ
ಹಸನಾದ ಬದುಕಿನ ಮಾರ್ಗ ತೋರಿದ ಶರಣ
ಕಸದಂತೆ ಕೀಳಾದವರ ಏಳ್ಗೆ ಮಾಡಿದ ದಾರ್ಶನಿಕ
ಈಶ ಕಾಯಕ ಯೋಗಿಗೆ ಶರಣು ಶರಣು
ಅಜ್ಞಾನ-ಮೂಢನಂಬಿಕೆಗಳನು ಹೊಡೆದೋಡಿಸಿದಾತ
ಸುಜ್ಞಾನದ ಪಥವನ್ನು ಜನರ ಮನಕೆ ನೀಡಿದಾತ
ಮೇಲು-ಕೀಳೆಂಬುದನು ಬೇರು ಸಮೇತ ಕಿತ್ತಿದಾತ
ಕಲ್ಯಾಣದಲಿ ಕ್ರಾಂತಿಯ ಕಹಳೆ ಊದಿದಾತ
ವಚನಗಳ ಮೂಲಕ ಸಮಾಜದ ಕೊಳೆ ತೊಳೆದಾತ
ಅಚಲ ಕಾಯಕ-ಭಕ್ತಿಯ ಮಾರ್ಗ ತೋರಿದಾತ
ಮಾಡಿಯೂ ಮಾಡದಂತಿರುವ ಸರಳತೆಯ ಹೇಳಿದಾತ
ನುಡಿಯೊಳಗಾಗಿ ನಡೆಯುವಂತೆ ತಿಳಿಸಿದಾತ
ಅಂತರಂಗ-ಬಹಿರಂಗ ಶುದ್ಧಿಯ ಸೂತ್ರ ಅರುಹಿದಾತ
ಮಂತ್ರ-ತಂತ್ರಗಳ ಕುತಂತ್ರವ ಬಯಲಿಗೆಳೆದಾತ
ಮಾಡುವ ಕಾಯಕದಲೆ ಕೈಲಾಸವನ್ನು ತೋರಿದಾತ
ಕೂಡಲಸಂಗಮ ದೇವನಲಿ ಒಂದಾಗಿ ನಡೆದಾತ
ಎಮ್. ಎಚ್. ಹಾಲ್ಯಾಳ (ಕೋಳೂರ)
ಮುದ್ದೇಬಿಹಾಳ.
ಜಿ|ವಿಜಯಪುರ.
ಪ್ರಕಟಣೆಗಾಗಿ ಸಂಪರ್ಕಿಸಿ:
ಇದು ವೆಬ್ ಸೈಟ್ ಮತ್ತು ಯ್ಯಾಪ. ಇದರಲ್ಲಿ ಪ್ರಕಟಣೆಗಾಗಿ ನಿಮ್ಮ ಕವನ, ಕಥೆ, ಪ್ರಬಂಧ, ಲೇಖನ ಹಾಗೂ ಪುಸ್ತಕ ವಿಮರ್ಶೆಗಳನ್ನು ಕಳುಹಿಸಬಹುದು.
WhatsApp No. 8310000414 ಗೆ ಕಳುಹಿಸಬಹುದು.
ಇದನ್ನೂ ಓದಿ: ಗಾಂಧಿ ನೇಯ್ದಿಟ್ಟ ಬಟ್ಟೆ
ಈಗಲೇ ವಾಟ್ಸಾಪ್ ಚಾನೆಲ್ ಫಾಲೋ ಮಾಡಿ: ಕ್ಲಿಕ್ ಮಾಡಿ