ಸಮಾಜ ಸುಧಾರಣೆಯ ಹರಿಕಾರ
ಸಮಾನತೆಯ ತತ್ವ ಬೋಧಿಸಿದ ಧೀರ
ಕಾಯಕವೇ ಕೈಲಾಸವೆಂದ
ತನ್ನ ವಚನಗಳಿಂದ ಜನಮನ ಗೆದ್ದ
ಬಡವ ಬಲ್ಲಿದ ಮೇಲು ಕೀಳು ಭಾವನೆ ಇಲ್ಲ
ಮೂಢನಂಬಿಕೆಯ ಬಿಟ್ಟು ಬನ್ನಿ ಎಲ್ಲಾ
ದಯೆಯಿರಲಿ ಸಕಲ ಜೀವಿಗಳಲ್ಲಿ ಎಂದನಲ್ಲ
ಅನುಭವ ಮಂಟಪ ಸ್ಥಾಪಿಸಿದನಲ್ಲ
ಮಾನವೀಯತೆಯ ಮೆರೆದ ಮಹಾನುಭಾವನು
ಭಕ್ತಿ ಭಂಡಾರಿ ಬಸವಣ್ಣ ದೇವರ ಸ್ವರೂಪನು
ಸಾಮಾಜಿಕ ತಾರತಮ್ಯ ಜಾತಿ ವ್ಯವಸ್ಥೆ ದೂರ ಮಾಡಿದ
ಶೋಷಣೆ ವಿರುದ್ಧ ಸಮರ ಸಾರಿ ನಿಜ ದೈವವಾದ
ವಚನ ಸಾಹಿತ್ಯಕ್ಕೆ ಇವರ ಕೊಡುಗೆ ಅಪಾರ
ನಂಬಿಹರು ಕೂಡಲಸಂಗಮದೇವ ಆರಾಧ್ಯ ದೈವರ
ಸಾರ್ಥಕ ಬಾಳಲ್ಲಿ ಸದ್ಭಾವನೆಯ ಬೀಜ ಬಿತ್ತಿಹರು
ತಿಮಿರ ಕಳೆದು ಬೆಳಕು ನೀಡಿದ ವಿಶ್ವಗುರು ಬಸವಣ್ಣನವರು
ಉಷಾ ಪ್ರಶಾಂತ್
ಸಿದ್ದಾಪುರ
ಪ್ರಕಟಣೆಗಾಗಿ ಸಂಪರ್ಕಿಸಿ:
ಇದು ವೆಬ್ ಸೈಟ್ ಮತ್ತು ಯ್ಯಾಪ. ಇದರಲ್ಲಿ ಪ್ರಕಟಣೆಗಾಗಿ ನಿಮ್ಮ ಕವನ, ಕಥೆ, ಪ್ರಬಂಧ, ಲೇಖನ ಹಾಗೂ ಪುಸ್ತಕ ವಿಮರ್ಶೆಗಳನ್ನು ಕಳುಹಿಸಬಹುದು.
WhatsApp No. 8310000414 ಗೆ ಕಳುಹಿಸಬಹುದು.
ಇದನ್ನೂ ಓದಿ: ಗಾಂಧಿ ನೇಯ್ದಿಟ್ಟ ಬಟ್ಟೆ
ಈಗಲೇ ವಾಟ್ಸಾಪ್ ಚಾನೆಲ್ ಫಾಲೋ ಮಾಡಿ: ಕ್ಲಿಕ್ ಮಾಡಿ