ನಮ್ಮ ದೇಶ ಭಾರತ ನಾವು ಭಾರತೀಯರೆನ್ನುವ
ನಾವೆಲ್ಲರು ಭಾರತಾಂಬೆಯ ಮಡಿಲ ಮಕ್ಕಳೆನ್ನುವ
ನಾವೆಲ್ಲ ಭಾರತದ ಸತ್ಪ್ರಜೆಯೆಂದು ಹೆಮ್ಮೆಪಡುವ
ನಮ್ಮ ಭಾರತ ಸ್ವತಂತ್ರ ದೇಶವೆಂದು ಹರುಷಿಸುವ
ಜಾತಿ ಧರ್ಮ ರಾಜ್ಯ ಭಾಷೆಗಿಂತ ದೇಶ ದೊಡ್ಡದೆನ್ನುವ
ಜಾತಿ-ಮತ ಭೇಧ-ಭಾವ ದ್ವೇಷವನ್ನು ಮಾಡದಿರುವ
ದೇಶ ಸೇವೆಯೇ ಈಶ ಸೇವೆಯೆನ್ನುತ ದುಡಿಯುವ
ದೇಶಪ್ರೇಮ ಮಾತೃಭೂಮಿಯ ರಕ್ಷಣೆಗೆ ಪಣತೊಡುವ
ನಮ್ಮ ದೇಶದ ಸೈನಿಕರ ನಮ್ಮ ರಕ್ಷಕರ ಗೌರವಿಸುವ
ಸ್ವಾತಂತ್ರ್ಯಕ್ಕಾಗಿ ಹೋರಾಡಿ ಮಡಿದವರ ಸ್ಮರಿಸುವ
ಭಾರತ ದೇಶ ಯೋಧರ ಭರತಭೂಮಿಯೆನ್ನುವ
ದೇಶದ ಗಡಿಯ ಕಾಯುವ ಯೋಧರಿಗೆ ನಮಿಸುವ
ಬಡವ ಬಲ್ಲಿದ ಮೇಲುಕೀಳೆಂಬ ಭಾವನೆ ತೊಡೆಯುವ
ಅಸಮಾನತೆಯ ಅಳಿಸುವ ಸ್ವಾಭಿಮಾನ ಕಟ್ಟುವ
ನಮ್ಮ ದೇಶದ ಸಂವಿಧಾನಕ್ಕೆ ಗೌರವಿಸಿ ತಲೆಬಾಗುವ
ಸರ್ವರೂ ಸಮಾನರೆಂಬ ಸ್ಥಿತಿ ನಿರ್ಮಾಣ ಮಾಡುವ
ಆಗಸ್ಟ್ ಹದಿನೈದು ಸ್ವಾತಂತ್ರ್ಯ ದಿನವ ಆಚರಿಸುವ
ಕೇಸರಿ ಬಿಳಿ ಹಸಿರು ಬಣ್ಣದ ತ್ರಿವರ್ಣ ಧ್ವಜವ ಹಾರಿಸುವ
ಸರ್ವ ಜನಾಂಗದ ಶಾಂತಿಯ ತೋಟ ಸಂದೇಶವ ಸಾರುವ
ಒಕ್ಕೊರಲಿನಿಂದ ಜೈ ಹಿಂದ್ ವಂದೇ ಮಾತರಂ ಎನ್ನುವ
ಪೂರ್ಣಿಮಾ ರಾಜೇಶ್
ಬೆಂಗಳೂರು
ಪ್ರಕಟಣೆಗಾಗಿ ಸಂಪರ್ಕಿಸಿ:
ಇದು ವೆಬ್ ಸೈಟ್ ಮತ್ತು ಯ್ಯಾಪ. ಇದರಲ್ಲಿ ಪ್ರಕಟಣೆಗಾಗಿ ನಿಮ್ಮ ಕವನ, ಕಥೆ, ಪ್ರಬಂಧ, ಲೇಖನ ಹಾಗೂ ಪುಸ್ತಕ ವಿಮರ್ಶೆಗಳನ್ನು ಕಳುಹಿಸಬಹುದು.
WhatsApp No. 8310000414 ಗೆ ಕಳುಹಿಸಬಹುದು.
ಇದನ್ನೂ ಓದಿ: ಸವಿತಾ ಮುದ್ಗಲ್ ಅವರ ನೆರಳಿಗಂಟಿದ ಭಾವ ಕವನ ಸಂಕಲನ ಕೃತಿಯ ಪರಿಚಯ
ಈಗಲೇ ವಾಟ್ಸಾಪ್ ಚಾನೆಲ್ ಫಾಲೋ ಮಾಡಿ: ಕ್ಲಿಕ್ ಮಾಡಿ