ಮುಸುಕಿನ ಗುದ್ದಾಟ

ಲೇಖಕರು : ಶಂಕರಗೌಡ ಸಾತ್ಮಾರ

ಪರ-ವಿರೋಧಿ ರಾಜಕಾರಣಿಗಳ

ರಾಜಕೀಯ ಡೊಂಬರಾಟಗಳ ನಡುವೆ

ಮನುಷ್ಯ ಕಳೆದು ಹೊಗಿದ್ದಾನೆ

 

ಉಧ್ಯಮಿ-ವಾಣಿಜ್ಯೋಧ್ಯಮಿಗಳ

ವ್ಯಾಪಾರ-ವಹಿವಾಟುಗಳ ನಡುವೆ

ಮನುಷ್ಯತ್ವ ಕಳೆದು ಹೋಗಿದೆ

 

ಧರ್ಮ ದೇವರು ಜಾತಿಗಳ

ಮೊಸಳೆ ಹಿಡಿತಳ ನಡುವೆ

ಮಾನವೀಯತೆ ಕಳೆದು ಹೋಗಿದೆ

 

ಜಗದ್ಗುರು-ಮಠಾಧೀಶರುಗಳ

ಶ್ರೇಷ್ಠತೆಯ ಮೇಲಾಟಗಳ ನಡುವೆ

ಮಾನವ ಪ್ರೀತಿ ಕಳೆದು ಹೋಗಿದೆ

 

ಮಳೆ-ಬೆಳೆಗಳ ಧವಸ-ಧಾನ್ಯಗಳ

ನಿರೀಕ್ಷೆಯ ಕನಸುಗಳ ನಡುವೆ

ಮನುಷ್ಯನ ಜೀವ ಕಳೆದು ಹೋಗಿದೆ.

 

ಶಂಕರಗೌಡ ಸಾತ್ಮಾರ

# 52, ಡಾ|| ರಾಧಾಕೃಷ್ಣನ್ ನಗರ,

ಗೋಕುಲ ರೋಡ, ಹುಬ್ಬಳ್ಳಿ 580030

No products were found for this query.

ಪ್ರಕಟಣೆಗಾಗಿ ಸಂಪರ್ಕಿಸಿ

ಇದು ವೆಬ್ ಸೈಟ್ ಮತ್ತು ಯ್ಯಾಪ. ಇದರಲ್ಲಿ ಪ್ರಕಟಣೆಗಾಗಿ ನಿಮ್ಮ ಕವನ, ಕಥೆ, ಪ್ರಬಂಧ, ಲೇಖನ ಹಾಗೂ ಪುಸ್ತಕ ವಿಮರ್ಶೆಗಳನ್ನು ಕಳುಹಿಸಬಹುದು.
e-mail ವಿಳಾಸ : contact@kannadabookpalace.com
ಅಥವಾ WhatsApp No. 8310000414 ಗೆ ಕಳುಹಿಸಬಹುದು.