ಮುಸುಕಿನ ಗುದ್ದಾಟ

ಲೇಖಕರು : ಶಂಕರಗೌಡ ಸಾತ್ಮಾರ

ಪರ-ವಿರೋಧಿ ರಾಜಕಾರಣಿಗಳ

ರಾಜಕೀಯ ಡೊಂಬರಾಟಗಳ ನಡುವೆ

ಮನುಷ್ಯ ಕಳೆದು ಹೊಗಿದ್ದಾನೆ

 

ಉಧ್ಯಮಿ-ವಾಣಿಜ್ಯೋಧ್ಯಮಿಗಳ

ವ್ಯಾಪಾರ-ವಹಿವಾಟುಗಳ ನಡುವೆ

ಮನುಷ್ಯತ್ವ ಕಳೆದು ಹೋಗಿದೆ

 

ಧರ್ಮ ದೇವರು ಜಾತಿಗಳ

ಮೊಸಳೆ ಹಿಡಿತಳ ನಡುವೆ

ಮಾನವೀಯತೆ ಕಳೆದು ಹೋಗಿದೆ

 

ಜಗದ್ಗುರು-ಮಠಾಧೀಶರುಗಳ

ಶ್ರೇಷ್ಠತೆಯ ಮೇಲಾಟಗಳ ನಡುವೆ

ಮಾನವ ಪ್ರೀತಿ ಕಳೆದು ಹೋಗಿದೆ

 

ಮಳೆ-ಬೆಳೆಗಳ ಧವಸ-ಧಾನ್ಯಗಳ

ನಿರೀಕ್ಷೆಯ ಕನಸುಗಳ ನಡುವೆ

ಮನುಷ್ಯನ ಜೀವ ಕಳೆದು ಹೋಗಿದೆ.

 

ಶಂಕರಗೌಡ ಸಾತ್ಮಾರ

# 52, ಡಾ|| ರಾಧಾಕೃಷ್ಣನ್ ನಗರ,

ಗೋಕುಲ ರೋಡ, ಹುಬ್ಬಳ್ಳಿ 580030

ಪ್ರಕಟಣೆಗಾಗಿ ಸಂಪರ್ಕಿಸಿ

ಇದು ವೆಬ್ ಸೈಟ್ ಮತ್ತು ಯ್ಯಾಪ. ಇದರಲ್ಲಿ ಪ್ರಕಟಣೆಗಾಗಿ ನಿಮ್ಮ ಕವನ, ಕಥೆ, ಪ್ರಬಂಧ, ಲೇಖನ ಹಾಗೂ ಪುಸ್ತಕ ವಿಮರ್ಶೆಗಳನ್ನು ಕಳುಹಿಸಬಹುದು.
e-mail ವಿಳಾಸ : contact@kannadabookpalace.com
ಅಥವಾ WhatsApp No. 8310000414 ಗೆ ಕಳುಹಿಸಬಹುದು.