You are currently viewing ವಿಶ್ವ ವಿಖ್ಯಾತಿ ಜಗಜ್ಯೋತಿ ಬಸವಣ್ಣ

ವಿಶ್ವ ವಿಖ್ಯಾತಿ ಜಗಜ್ಯೋತಿ ಬಸವಣ್ಣ

ಮಾದರಸ ಮಾದಲಾಂಬಿಕೆಯರ ಉದರದಿ ಜನಿಸಿದ ಜಗದೋದ್ಧಾರಕನು
ಹನ್ನೆರಡನೇ ಶತಮಾನದ ಶ್ರೇಷ್ಠ ವಚನಕಾರನು
ಸರಳ ಸುಲಭ ಸಾಮಾನ್ಯನಿಗೂ ಅರ್ಥವಾಗುವ ಸಾಹಿತ್ಯಕಾರನು
ಪರಮಾತ್ಮನ ಕರುಣೆಯ ಕಂದನಾಗಿ ಅವತರಿಸಿದನು

ಕಾಯಕದಲ್ಲಿ ಮೇಲು ಕೀಳೆಂಬುದಿಲ್ಲ ಎಂದು ಸಾರಿದನು
ಜಾತಿ ಭೇದ ತೊಲಗಿಸಿದ ಕಲ್ಯಾಣ ಕ್ರಾಂತಿಕಾರನು
ನವ ಸಮಾಜದ ನಿರ್ಮಾಣದ ನಿರ್ಮಾಪಕನು
ಸ್ತ್ರೀ ಪುರುಷ ಅಸಮಾನತೆಯನ್ನು ವಿರೋಧಿಸಿದ ವಿಮರ್ಶಕನು

ಕಾಯಕವೇ ಕೈಲಾಸ,ದಯವೇ ಧರ್ಮ ಎಂದವನು
ಅಲ್ಲಮ ಅಕ್ಕಮಹಾದೇವಿಯರ ಸಮಕಾಲಿನವನು
ಸಂಗಮನಾಥನಲ್ಲಿ ಭಕ್ತಿ,ಮುಕ್ತಿ ಪಡೆದನು
ಭಕ್ತಿ ಭಂಡಾರಿ ವಿಶ್ವಗುರು ಬಸವಣ್ಣನು

ಅನುಭವ ಮಂಟಪದ ರೂವಾರಿಗಳಲ್ಲಿ ಅಗ್ರಮಾನ್ಯನು
ಸರ್ವ ಸ್ಥಳ ಸರ್ವಕಾಲಕ್ಕೂ ಪೂಜಿತನು
ಅವನು ಬೇರೆಯವನಲ್ಲ,ಇವ ನಮ್ಮವ ಎಂದವನು
ಅಕ್ಷರಸ್ಥ ಅನಕ್ಷರಸ್ಥರಂತೆ ವರ್ತಿಸುತ್ತಿರುವನು

ಅನ್ಯಾಯ ಅಧರ್ಮಿಯನು ಅಂಧಕಾರದಿ ಕುಣಿಯುತ್ತಿರುವನು
ಶಾಂತಿಯ ಸೂರು ಇದ್ದರೆ ನಾಳೆಯ ಪ್ರಜೆ ನೆಮ್ಮದಿಯಿಂದ ಬದುಕುವನು
ಕಲಿಯುಗಕೆ ಮತ್ತೆ ಹುಟ್ಟಿ ಬರಲಿ ಈ ಪುಣ್ಯಾತ್ಮನು
ವಿಶ್ವ ವಿಖ್ಯಾತಿ ಪಡೆದ ಜಗಜ್ಯೋತಿ ಬಸವಣ್ಣನು.

ಮಲ್ಲಮ್ಮ ವಡ್ಡರ
ಕನ್ನಡ ಭಾಷಾ ಸಹಶಿಕ್ಷಕರು
ಸರ್ಕಾರಿ ಆದರ್ಶ ವಿದ್ಯಾಲಯ ಅನಂತನಹಳ್ಳಿ (ಹರಪನಹಳ್ಳಿ)


ಪ್ರಕಟಣೆಗಾಗಿ ಸಂಪರ್ಕಿಸಿ:

ಇದು ವೆಬ್ ಸೈಟ್ ಮತ್ತು ಯ್ಯಾಪ. ಇದರಲ್ಲಿ ಪ್ರಕಟಣೆಗಾಗಿ ನಿಮ್ಮ ಕವನ, ಕಥೆ, ಪ್ರಬಂಧ, ಲೇಖನ ಹಾಗೂ ಪುಸ್ತಕ ವಿಮರ್ಶೆಗಳನ್ನು ಕಳುಹಿಸಬಹುದು.
WhatsApp No. 8310000414 ಗೆ ಕಳುಹಿಸಬಹುದು.

ಇದನ್ನೂ ಓದಿ: ಗಾಂಧಿ ನೇಯ್ದಿಟ್ಟ ಬಟ್ಟೆ
ಈಗಲೇ ವಾಟ್ಸಾಪ್ ಚಾನೆಲ್ ಫಾಲೋ ಮಾಡಿ: ಕ್ಲಿಕ್ ಮಾಡಿ