ಭಾರತೀಯ ಸಂವಿಧಾನದ ಮೂಲ ನಿರ್ಮಾತರಿವರು
ದೀನದಲಿತರ ಬಾಳಿಗೆ ಬೆಳಕಾದ ನಾಯಕರಿವರು
ಸಾಮಾಜಿಕ ಕಳಕಳಿ ತಾಳ್ಮೆಯ ಮನೋಭಾವದವರು
ಬುಧ್ಧ- ಬಸವ ಗಾಂಧಿಯಂತೆ ಸಮಾಜ ಸುಧಾರಕರು
ಅರ್ಥ ಶಾಸ್ತ್ರಜ್ಞರು ಮೇಧಾವಿಗಳು ಶಿಕ್ಷಣ ತಜ್ಞರಿವರು
ಬಹುಮುಖ ಪ್ರತಿಭೆಯ ಪ್ರತಿಭಾನ್ವಿತ ವ್ಯಕ್ತಿತ್ವದವರು
ಸೌಜನ್ಯ ಮತ್ತು ಸನ್ನಡತೆವುಳ್ಳ ಆದರ್ಶವಂತರಿವರು
ಬಹುತೇಕ ಧರ್ಮಗ್ರಂಥಗಳ ಅಧ್ಯಯನ ಮಾಡಿದರು
ಸರ್ವ ಶ್ರೇಷ್ಠ ಸಂವಿಧಾನದ ತಜ್ಞರು ವಿದ್ವಾಂಸರಿವರು
ಮೂಲಭೂತ ಹಕ್ಕು ಕಾಯ್ದೆಗಾಗಿ ಹೋರಾಡಿದವರು
ಭಾರತೀಯ ಮಹಿಳೆಯರ ಹಕ್ಕಿಗಾಗಿ ಶ್ರಮಿಸಿದವರು
ಹಿಂದೂ ಕೋಡ್ ಬಿಲ್ ನ್ನು ಜಾರಿಗೆ ತರಲೆತ್ನಿಸಿದವರು
ಸ್ವಾತಂತ್ರ ಸಮಾನತೆ ಭ್ರಾತೃತ್ವದ ಸಂದೇಶ ಸಾರಿದವರು
ನಮ್ಮ ಸಂವಿಧಾನದ ಅರ್ಥ ಮಹತ್ವವ ತಿಳಿಸಿದವರು
21ನೇ ಶತಮಾನ ಕಂಡ ಧೀಮಂತ ನಾಯಕರಿವರು
ಬಾಬಾ ಸಾಹೇಬ ಡಾ.ಬಿ.ಆರ್.ಅಂಬೇಡ್ಕರ್ ಯಿವರು
ಪೂರ್ಣಿಮಾ ರಾಜೇಶ್
ಬೆಂಗಳೂರು
ಪ್ರಕಟಣೆಗಾಗಿ ಸಂಪರ್ಕಿಸಿ:
ಇದು ವೆಬ್ ಸೈಟ್ ಮತ್ತು ಯ್ಯಾಪ. ಇದರಲ್ಲಿ ಪ್ರಕಟಣೆಗಾಗಿ ನಿಮ್ಮ ಕವನ, ಕಥೆ, ಪ್ರಬಂಧ, ಲೇಖನ ಹಾಗೂ ಪುಸ್ತಕ ವಿಮರ್ಶೆಗಳನ್ನು ಕಳುಹಿಸಬಹುದು.
WhatsApp No. 8310000414 ಗೆ ಕಳುಹಿಸಬಹುದು.
ಇದನ್ನೂ ಓದಿ: ಗಾಂಧಿ ನೇಯ್ದಿಟ್ಟ ಬಟ್ಟೆ
ಈಗಲೇ ವಾಟ್ಸಾಪ್ ಚಾನೆಲ್ ಫಾಲೋ ಮಾಡಿ: ಕ್ಲಿಕ್ ಮಾಡಿ