ಮನವು ಹೇಗೆ ಅರಳುವುದು
ಆಸೆ ಹೇಗೆ ಹುಟ್ಟುವುದು
ಕನಸು ಹೇಗೆ ನನಸಾಗುವುದು
ಬದುಕು ಹೇಗೆ ಬದಲಾಗುವುದು
ಪ್ರೀತಿ ಇಲ್ಲ ಎಂದ ಮೇಲೆ
ಮೈತ್ರಿ ಭಾವ ಹೇಗೆ ಬೆಳೆಯುವುದು
ಕರುಣೆಯ ಕಡಲು ಹೇಗೆ ಹರಿಯುವುದು
ಧರ್ಮದ ಮಾರ್ಗ ಹೇಗೆ ಹಿಡಿಯುವುದು
ಮನವು ನ್ಯಾಯ ನೀತಿಯಿಂದ ಹೇಗೆ ಬಾಳುವುದು
ಪ್ರೀತಿ ಇಲ್ಲ ಎಂದ ಮೇಲೆ
ಸಮುದಾಯದ ನೋವಿಗೆ ಮನ ಸ್ಪಂದಿಸುವುದೇ
ಜನರ ಕಷ್ಟಕ್ಕೆ ಹೆಗಲಾಗುವುದೇ
ಅನ್ಯಾಯದ ವಿರುದ್ಧ ಸಿಡಿದೇಳುವುದೇ
ಪ್ರೀತಿ ಇಲ್ಲ ಎಂದ ಮೇಲೆ
ದಮನಿತರ ಕೂಗಿಗೆ ಕೊರಳಾಗುವುದೇ
ಸತ್ಯದ ಮಾರ್ಗ ಅರಿಯುವುದೇ
ಪ್ರಜ್ಞೆಯ ಅರಿವು ಮೂಡುವುದೇ
ಪ್ರೀತಿ ಇಲ್ಲದ ಎಂದ ಮೇಲೆ
ಮನುಷ್ಯತ್ವದ ಪರಿಮಳ ಬೀರುವುದೇ
ದ್ವೇಷದ ಜ್ವಾಲೆ ನಂದುವುದೇ
ಜ್ಞಾನ ಜ್ಯೋತಿ ಬೆಳಗುವುದೇ
ಸಮತೆಯ ಕುಸುಮ ಉಸ್ಮೆನಿಸುವುದೇ
ಪ್ರೀತಿ ಇಲ್ಲ ಎಂದ ಮೇಲೆ
ಜಾತಿ ಭೇದಭಾವ ದೂರಾ ಗುವುದೇ
ಮೋಹಮತ್ಸರ ಅಳೆಯುವುದೇ
ನಿಸ್ವಾರ್ಥತೆ ಮನ ಬಯಸುವುದೇ
ಪರರ ಕಣ್ಣೀರು ಒರೆಸುವುದೇ
ಪ್ರೀತಿ ಇಲ್ಲ ಎಂದ ಮೇಲೆ
ಒಗ್ಗಟ್ಟಿನ ಬಲ ಅರಿಯುವರೇ
ಶಿಕ್ಷಣದ ಶಕ್ತಿ ತಿಳಿಯುವರೇ
ಸಮಾನತೆಯ ಭಾವ ಹೊಂದುವರೇ
ನೋಡುವ ದೃಷ್ಟಿ ಬದಲಾಯಿಸಿಕೊಳ್ಳುವರೇ.???
ಜ್ಯೋತಿ ಬಸವರಾಜ ಬೆಳವಿ