ಹನ್ನೆರಡನೇ ಶತಮಾನದ ಅತೀಂದ್ರಿಯ
ಸಂತರು ಕನ್ನಡದ ಕವಿ ವಚನಕಾರರು ತತ್ವಜ್ಞಾನಿಯವರು
ಲಿಂಗಾಯಿತ ಧರ್ಮದ ಸಂಸ್ಥಾಪಕ ಬಸವಣ್ಣನವರು
ವಚನ ಸಾಹಿತ್ಯದ ಮೂಲಕ ಅರಿವು ಮೂಡಿಸಿದವರು
ಇಷ್ಟಲಿಂಗವೆಂಬ ಗಣಲಾಂಛನವನ್ನು ಧರಿಸಿದವರು
ಕಾರಣಿಕ ಪುರುಷ ವಿಶ್ವ ವಿಭೂತಿ ಬಸವಣ್ಣನವರು
ಕಾಲಜ್ಞಾನ ಶಿಖಾರತ್ನ ವಚನ ಗ್ರಂಥಗಳ ಬರೆದವರು
ಸಮಾನತೆ ಕಾಯಕ ದಾಸೋಹ ತತ್ವಗಳ ಪ್ರಚಾರಕರು
ಕಾಯಕ ನಿಷ್ಠೆ ಧರ್ಮದ ಬುನಾದಿಯಾಗಬೇಕೆಂದವರು
ಕಾಯಕವೇ ಕೈಲಾಸ ಕಾಯಕದ ಮಹತ್ವ ತಿಳಿಸಿದವರು
ಕಾಯಕ ಯೋಗಿಗಳನ್ನು ಶಿವಶರಣರೆಂದು ಕರೆದವರು
ಕಾಯಕಕ್ಕೆ ಪ್ರಧಾನ ಆದ್ಯತೆಯನ್ನು ನೀಡಿದವರು
ಭಕ್ತಿ ಭಂಡಾರಿ ಜಗಜ್ಯೋತಿ ಬಸವೇಶ್ವರರಿವರು
ಆಧ್ಯಾತ್ಮಿಕ ಅನುಭವ ಮಂಟಪವ ನಿರ್ಮಾತರಿವರು
ಕರ್ಮ,ಭಕ್ತಿ,ಮತ್ತು ಜ್ಞಾನಯೋಗ ಸಿದ್ಧಿಸಿಕೊಂಡವರು
ಭಕ್ತಿ ಮಾರ್ಗವನ್ನು ಪ್ರತಿಪಾದಿಸಿದ ವಿಶ್ವ ಗುರುಯಿವರು
ಜಾತಿ- ಭೇಧ ಲಿಂಗ ತಾರತಮ್ಯವನ್ನು ಅಲ್ಲಗಳೆದವರು
ಸಮ -ಸಮಾಜದ ಪರಿಕಲ್ಪನೆಯ ರೂವಾರಿಗಳಿವರು
ಮಹಾ ಮಾನವತಾವಾದಿ ಕ್ರಾಂತಿಯೋಗಿಯಿವರು
ಈ ನಾಡು ಕಂಡ ಅಪೂರ್ವ ಶೇಷ್ಠ ತತ್ವಜ್ಞಾನಿಯವರು
ಶರಣು ಶರಣಾರ್ಥಿ
ಪೂರ್ಣಿಮಾ ರಾಜೇಶ್
ಬೆಂಗಳೂರು
ಪ್ರಕಟಣೆಗಾಗಿ ಸಂಪರ್ಕಿಸಿ:
ಇದು ವೆಬ್ ಸೈಟ್ ಮತ್ತು ಯ್ಯಾಪ. ಇದರಲ್ಲಿ ಪ್ರಕಟಣೆಗಾಗಿ ನಿಮ್ಮ ಕವನ, ಕಥೆ, ಪ್ರಬಂಧ, ಲೇಖನ ಹಾಗೂ ಪುಸ್ತಕ ವಿಮರ್ಶೆಗಳನ್ನು ಕಳುಹಿಸಬಹುದು.
WhatsApp No. 8310000414 ಗೆ ಕಳುಹಿಸಬಹುದು.
ಇದನ್ನೂ ಓದಿ: ಗಾಂಧಿ ನೇಯ್ದಿಟ್ಟ ಬಟ್ಟೆ
ಈಗಲೇ ವಾಟ್ಸಾಪ್ ಚಾನೆಲ್ ಫಾಲೋ ಮಾಡಿ: ಕ್ಲಿಕ್ ಮಾಡಿ