ಭಾರತೀಯರೆಲ್ಲರ ಹೊಸ ವರ್ಷದ
ಶುಭಾರಂಭವು ಎಲ್ಲೆಲ್ಲೂ ಸಡಗರ
ಸಂಭ್ರಮವು ತಳಿರು ತೋರಣಗಳ
ರಂಗೋಲಿಯ ಅಲಂಕಾರವು
ನವ ಚೈತ್ರದ ಚಿಗುರು ಭೂರಮೆಗೆ
ಕೋಗಿಲೆಯ ಇಂಚರ ಕರ್ಣಾನಂದ
ಭ್ರಂಗಗಳ ಝೆಂಕಾರ ವನ ತುಂಬಿದೆ
ಬೇವು ಬೆಲ್ಲ ಸವಿಯುವ ಹಬ್ಬವಿದು
ಮನೆ ಮಂದಿಯೆಲ್ಲಾ ಅಭ್ಯಂಜನ
ಸ್ನಾನ ಮಾಡಿ ಹೊಸ ಬಟ್ಟೆ ಧರಿಸಿ
ಪೂಜಾ ಕೈಂಕರ್ಯ ಮಾಡಿ ಧನ್ಯರು
ದೇವರಿಗೆ ನೈವೇದ್ಯ ಸಮರ್ಪಣೆ
ಹೆಂಗಳೆಯರೆಲ್ಲ ಸೇರಿ ವಿವಿಧ ಬಗೆಯ
ಸಿಹಿ ತಿಂಡಿ ತಿನಿಸು ಭಕ್ಷ್ಯ ಭೋಜನಗಳ
ತಯಾರಿಸಿ ಉಣ ಬಡಿಸುವರು ಕಡೆಗೆ
ಎಲೆ ಅಡಿಕೆ ತಿಂದು ಹರಟೆ ಹೊಡೆವರು
ಬೆಳ್ಳಿ ಬಂಗಾರ ಖರೀದಿ ಭರಾಟೆ ಜೋರು
ಹೊಸ ವ್ಯಾಪಾರ ವಹಿವಾಟು ನೋಡು
ಜೀವನದಿ ಸುಖ ದುಃಖ ಬೇವು ಬೆಲ್ಲದಂತೆ
ಯಾವುದೂ ಶಾಶ್ವತವಲ್ಲ ನಿತ್ಯ ಸತ್ಯವು
ಪ್ರೊ ಜಯಶ್ರೀ ಹಿರೇಮಠ
ಆಯುರ್ವೇದ ಮತ್ತು ಜಾನಪದ ವೈದ್ಯರು ಮತ್ತು ಸಾಹಿತಿ ಧಾರವಾಡ.
ಮೋ. 9449819425
ಪ್ರಕಟಣೆಗಾಗಿ ಸಂಪರ್ಕಿಸಿ:
ಇದು ವೆಬ್ ಸೈಟ್ ಮತ್ತು ಯ್ಯಾಪ. ಇದರಲ್ಲಿ ಪ್ರಕಟಣೆಗಾಗಿ ನಿಮ್ಮ ಕವನ, ಕಥೆ, ಪ್ರಬಂಧ, ಲೇಖನ ಹಾಗೂ ಪುಸ್ತಕ ವಿಮರ್ಶೆಗಳನ್ನು ಕಳುಹಿಸಬಹುದು.
WhatsApp No. 8310000414 ಗೆ ಕಳುಹಿಸಬಹುದು.