ಲಿಂಗಾಯತ ಧರ್ಮದ ಸಂಸ್ಥಾಪಕ
ಅಂಧ ಶ್ರದ್ಧೆ , ಜಡ ಸಂಪ್ರದಾಯಗಳನ್ನು ಒಪ್ಪದ ಸತ್ಯಾನ್ವೇಶಕ
ಪರಮಾತ್ಮನ ದಿವ್ಯ ದರುಶನ ಪಡೆದ ಮಹಾನ್ ಸಾಧಕ
ನಮಗೆಲ್ಲ ತಿಳಿಸಿದರು ಬಿಡದೆ ಮಾಡಿರಿ ಕಾಯಕ…
ಸಾಮಾಜಿಕ ಅರಿವು ಮೂಡಿಸಿದರು ತಮ್ಮ ವಚನಗಳ ಮೂಲಕ
ದಯವೇ ಧರ್ಮದ ಮೂಲ ಎಂದು ಹೇಳಿದ ನಾಯಕ
ಎಲ್ಲ ಪ್ರಾಣಿಗಳಲ್ಲಿ ದಯ ವಿರಬೇಕು
ಅದಿಲ್ಲದಿದ್ದರೆ ನಮ್ಮ ಬದುಕು ನಿರರ್ಥಕ….
ತನ್ನನ್ನು ತಾನ್ಯಾರು ಎಂದು ತಿಳಿದರೆ ತಾನೇ ದೇವ
ಅನ್ಯರ ತಪ್ಪನ್ನು ತಿದ್ದುವ ಬದಲು ಸ್ವತಃ ತಿದ್ದಿಕೊಳ್ಳಿ
ಜಗದೊಳು ದೇವರು ಒಬ್ಬನೇ ಎಂದು ಅರುಹಿದರು …
ಎನಗಿಂತ ಕಿರಿಯರಿಲ್ಲ ಶಿವ ಭಕ್ತರಿಗಿಂತ ಹಿರಿಯರಿಲ್ಲ
ಎಂದು ಹುಲುಮಾನವನಿಗೆ
ತಿಳಿಸಿದರು ನಮ್ಮ ಬಸವಣ್ಣ
ವಿಶ್ವಗುರು ಆದರು ನಮ್ಮ ಬಸವಣ್ಣ
ಇವರೇ ಜಗಜ್ಯೋತಿ ಬಸವಣ್ಣ…
ಆರ್ ಡಿ ಜೋಶಿ
ಸಂಯೋಜಕರು
ಗಣಕ ಯಂತ್ರ ವಿಭಾಗ, ಎಸ್ ಬಿ ಕಲಾ ಹಾಗೂ
ಕೆ ಸಿ ಪಿ ವಿಜ್ಞಾನ ಮಹಾವಿದ್ಯಾಲಯ ವಿಜಯಪುರ
8050415730
ಪ್ರಕಟಣೆಗಾಗಿ ಸಂಪರ್ಕಿಸಿ:
ಇದು ವೆಬ್ ಸೈಟ್ ಮತ್ತು ಯ್ಯಾಪ. ಇದರಲ್ಲಿ ಪ್ರಕಟಣೆಗಾಗಿ ನಿಮ್ಮ ಕವನ, ಕಥೆ, ಪ್ರಬಂಧ, ಲೇಖನ ಹಾಗೂ ಪುಸ್ತಕ ವಿಮರ್ಶೆಗಳನ್ನು ಕಳುಹಿಸಬಹುದು.
WhatsApp No. 8310000414 ಗೆ ಕಳುಹಿಸಬಹುದು.
ಇದನ್ನೂ ಓದಿ: ಗಾಂಧಿ ನೇಯ್ದಿಟ್ಟ ಬಟ್ಟೆ
ಈಗಲೇ ವಾಟ್ಸಾಪ್ ಚಾನೆಲ್ ಫಾಲೋ ಮಾಡಿ: ಕ್ಲಿಕ್ ಮಾಡಿ