ಜೀವನದ ಕುಶಲತೆಗ ಒರೆಹಚ್ಚಿಸಿ ಬರೆಸುವುದು ಪರೀಕ್ಷೆ.
ಪಾವನ ರಕ್ಷೆಯ ನಿರೀಕ್ಷಿತ ಛಲವು ಕರೆಸುವುದು ಪರೀಕ್ಷೆ.
ಪ್ರತಿ ಮನೆಯ ಬೆಳಗು ಬರುವ ಕಷ್ಟಕೋಟಲೆಗಳೆಷ್ಟೊ.
ಶೃತಿ ಸೇರದೆ ಹೋದರೆ ಬಾಳ್ವೆಯ ತೊರೆಸುವುದು ಪರೀಕ್ಷೆ.
ಬೆವರಿನ ಹನಿಗಳ ಬೆಲೆ ತಿಳಿಯದೆ ಭಾರವೆನಿಸುವ ತರಲೆಗಳು
ತವರಿನ ಮನೆಯ ನೆನಪು ಉಮ್ಮಳಿಸಿ ಧಾರೆಯಾಗಿ ಒರೆಸುವುದು ಪರೀಕ್ಷೆ
ಮಾಗಿಯ ಚಳಿಯಲ್ಲಿ ಮಿಂಚಾಗಿ ಸುಳಿದು ನೋವು ತಂದಿದೆ ನೋಡು
ಬಾಗಿಲ ಬಳಿಯಲಿ ಸಂಚಾಗಿ ನಿಂದು ಅಳೆದು ತೆರೆಸುವುದು ಪರೀಕ್ಷೆ .
ಬಂದದ್ದೆಲ್ಲವು ಆ ದೇವನ ಇಚ್ಛೆ ಎನುತ ಜಯಾ ಮೌನವಾಗಿಹಳು
ಅಂದದ್ದೆಲ್ಲ ಒಳ್ಳೆಯದಕೆ ಅರಿತು ಹೆದರದೆ ಮೆರೆಸುವುದು ಪರೀಕ್ಷೆ..
ಜಯಶ್ರೀ ಭ ಭಂಡಾರಿ
ಬಾದಾಮಿ
ಪ್ರಕಟಣೆಗಾಗಿ ಸಂಪರ್ಕಿಸಿ:
ಇದು ವೆಬ್ ಸೈಟ್ ಮತ್ತು ಯ್ಯಾಪ. ಇದರಲ್ಲಿ ಪ್ರಕಟಣೆಗಾಗಿ ನಿಮ್ಮ ಕವನ, ಕಥೆ, ಪ್ರಬಂಧ, ಲೇಖನ ಹಾಗೂ ಪುಸ್ತಕ ವಿಮರ್ಶೆಗಳನ್ನು ಕಳುಹಿಸಬಹುದು.
E-Mail ವಿಳಾಸ : Contact@Kannadabookpalace.Com
WhatsApp No. 8310000414 ಗೆ ಕಳುಹಿಸಬಹುದು.