+918310000414
contact@kannadabookpalace.com
+918310000414
contact@kannadabookpalace.com
₹150.00
Timely Arrival:
5–10 Days
To Your Doorstep
UPI • Cards • Net Banking
100% Safe & Secure
On Orders Above
₹999
ಗುರುಸ್ವಾಮಿ ಗಣಾಚಾರಿ ಅವರು ೧೦-೦೨-೧೯೪೪ ರಂದು ಜನಿಸಿದರು. ಇವರು ಬಾಗಲಕೋಟೆ ಜಿಲ್ಲೆಯ ಚಿಕ್ಕ ಹೊದ್ದೂರ ಗ್ರಾಮದವರು. ಎಂ.ಎ. ಬಿ.ಎಡ್. ಪದವೀಧರರು. ಅಲ್ಲದೆ ಸಂಗೀತ ವಿದ್ವಾನ್, ಸಂಗೀತ ವಿಶಾರದ, ಆಯುರ್ವೇದ ವೈದ್ಯ ವಿಶಾರದ ಪದವಿ ಪಡೆದಿದ್ದಾರೆ. ತಂದೆ ಗಂಗಯ್ಯ, ತಾಯಿ ಗೌರಮ್ಮ. ಪ್ರಾಥಮಿಕ ಶಾಲಾ ಶಿಕ್ಷಕರಾಗಿ ಸೇವೆ ಆರಂಭಿಸಿ, ಪ್ರೌಢಶಾಲಾ ಶಿಕ್ಷಕರಾಗಿ ಪದನೋನ್ನತಿ ಹೊಂದಿ ಒಟ್ಟು ೩೭ ವರ್ಷಗಳ ಕಾಲ ಸೇವೆ ಸಲ್ಲಿಸಿ ಬಾಗಲಕೋಟೆಯ ಮುಚಖಂಡಿಯಲ್ಲಿ ವಿಶ್ರಾಂತ ಜೀವನ ನಡೆಸುತ್ತಿದ್ದಾರೆ. ತಮ್ಮ ಶಿಕ್ಷಕ ವೃತ್ತಿಯ ಸೇವೆಗಾಗಿ ರಾಜ್ಯ (೧೯೮೯) ಮತ್ತು ರಾಷ್ಟ್ರ ಪ್ರಶಸ್ತಿ (೧೯೯೨) ಪುರಸ್ಕೃತರು.
ಗುರುಸ್ವಾಮಿ ಗಣಾಚಾರಿಯವರು ಇದುವರೆಗೆ ಒಟ್ಟು ೭೦ ಕೃತಿಗಳನ್ನು ರಚಿಸುವ ಮೂಲಕ ಪ್ರಮುಖ ಸಾಹಿತಿಗಳಾಗಿ ಗುರುತಿಸಿಕೊಂಡಿದ್ದಾರೆ. ಭಕ್ತಿಗೀತೆ, ಭಾವಗೀತೆ, ಜಾನಪದ, ತ್ರಿಪದಿ, ವಚನ, ಕಥೆ, ಕಾದಂಬರಿ, ಮಕ್ಕಳ ಸಾಹಿತ್ಯ, ಪ್ರವಾಸ ಕಥನ ಮತ್ತು ನಾಟಕ ಮುಂತಾದ ಪ್ರಕಾರಗಳಲ್ಲಿ ಸಾಹಿತ್ಯಕೃಷಿ ಗೈದಿದ್ದಾರೆ.
ಪ್ರಸ್ತುತ ಕಥಾ ಸಂಕಲನದಲ್ಲಿ ೩೪ ಕಥೆಗಳಿವೆ. ಮಕ್ಕಳ ಮಟ್ಟಕ್ಕೆ ತಕ್ಕಂತೆ ಸರಳ ಭಾಷೆ, ಶೈಲಿ, ನಿರೂಪಣೆ ಹೊಂದಿವೆ. ಈ ಕಥೆಗಳ ಪ್ರಸಂಗಗಳು ರಸವತ್ತಾಗಿವೆ. ಮಕ್ಕಳಂತೆ ಪ್ರೌಢ ಓದುಗರಿಗೂ ರಂಜಿಸುತ್ತವೆ. ಗಣಾಚಾರಿಯವರಿಂದ ಇಂತಹ ಮೌಲ್ಯಯುತ ಕೃತಿಗಳು ಬರಲೆಂದು ಹಾರೈಸುವೆ.
ಡಾ. ಮೈನುದ್ದೀನ ರೇವಡಿಗಾರ
Sector No. 46 navanagar bagalkot
+918310000414
contact@kannadabookpalace.com
www.kannadabookpalace.com
©2021-2026 Kannada Book Palace All Rights Reserved
Reviews
There are no reviews yet.