ಧನಿಕನು ಒಲಿಸಲು ಶಿವನನ್ನು
ಕಟ್ಟುವನು ದೇವಾಲಯವನ್ನು
ದೇಹವನ್ನು ಗುಡಿ ಮಾಡಿ ಬಡವನು
ಮನದಲ್ಲಿ ಶಿವನ ಪ್ರತಿಷ್ಠಾಪಿಸುವನು
ಎನುತ ಆತ್ಮಶುದ್ಧಿಯ ಮಾರ್ಗ ಬೋಧಿಸಿದನು
ಧನಿಕನ ಡಂಬಾಚಾರದ ಭಕ್ತಿಗಿಂತ
ಬಡವನ ಮನದ ಶ್ರದ್ಧೆಯೇ ಮೇಲು
ಹೊರಜಗಕೆ ಕಾಣುವ ಗುಡಿಗಿಂತ
ಮನದ ಆಲಯ ಮೆಚ್ಚುವ ಶಿವನು
ಎನುತ ಮನದ ಕಲ್ಮಶವನು ಕಳೆದನು
ಅಳಿವುಂಟು ಲೌಕಿಕದ ಆಲಯಕ್ಕೆ
ಅಳಿವಿಲ್ಲ ಆತ್ಮವೆಂಬ ಅಲೌಕಿಕ ಮಂದಿರಕ್ಕೆ
ಅಷ್ಟೈಶ್ವರ್ಯ ಸುರಿದರೂ ಇರನು
ಶುದ್ಧಾತ್ಮ ಭಕ್ತಿಗೊಂದೆ ಒಲಿವ ಶಿವನು
ಎನುತ ಮುಕ್ತಿಗೆ ದಾರಿಯನು ತೋರಿದನು
ಕಾಯಕವೇ ಕೈಲಾಸವೆಂದರುಹಿದನು
ಜಗಜ್ಯೋತಿ ಬಸವಣ್ಣನೆನಿಸಿದನು
ವಚನಾಮೃತದಿ ಜೀವನಸಾರ ಉಣಿಸಿದನು
ಬಸವನ ಭಾವನೆಗಳನು ಗೌರವಿಸೋಣ
ಬಸವತತ್ವವನು ಪ್ರತಿಪಾದಿಸೋಣ
ಶ್ರೀಮತಿ ದೀಪಾಲಿ ಸಾಮಂತ
ದಾಂಡೇಲಿ, ಉತ್ತರ ಕನ್ನಡ
.
ಪ್ರಕಟಣೆಗಾಗಿ ಸಂಪರ್ಕಿಸಿ:
ಇದು ವೆಬ್ ಸೈಟ್ ಮತ್ತು ಯ್ಯಾಪ. ಇದರಲ್ಲಿ ಪ್ರಕಟಣೆಗಾಗಿ ನಿಮ್ಮ ಕವನ, ಕಥೆ, ಪ್ರಬಂಧ, ಲೇಖನ ಹಾಗೂ ಪುಸ್ತಕ ವಿಮರ್ಶೆಗಳನ್ನು ಕಳುಹಿಸಬಹುದು.
WhatsApp No. 8310000414 ಗೆ ಕಳುಹಿಸಬಹುದು.
ನಿಜ ಬಸವಣ್ಣನವರು ಜಾತಿ ಧರ್ಮ ಮೀರಿ ಬೆಳೆದವರು.ಆದರೆ ಅವರ ತತ್ವ ಆದರ್ಶಗಳನ್ನು ಚೌಕಟ್ಟಿನ ಚೌಕದಲ್ಲಿ ಬಂಧಿಸುವ ಜನರ ಮನಸ್ಥಿತಿ ಬದಲಾವಣೆ ಮಾಡಿಕೊಂಡರೆ ಮಾತ್ರ ಬದುಕು ಸಾರ್ಥಕ…