ಮಾತೆ ಮುತ್ತದು
ಮಾತೆ ಮೃತ್ಯುವು
ಮಾತೆ ಜಗದಲಿ ಮಾಣಿಕವು
ಮಾತೆ ಮಿತ್ರನು
ಮಾತೆ ಶತ್ರುವು
ಮಾತೆ ಬಂಧದ ಬೆಸುಗೆಯು
ಮಾತು ನುಡಿದರೆ
ಮಾತು ಕರ್ಣಕೆ
ಮಾತುಗಳು ತಂಪಿರಬೇಕು
ಮಾತು ಮಲ್ಲಿಗೆ
ಮಾತು ಸಂಪಿಗೆ
ಮಾತುಗಳು ಕಂಪಿರಬೇಕು
ಒಲವು ಮಾತಲಿ
ಬಲವು ಮಾತಲಿ
ಗೆಲುವು ಮಾತಲಿ ಹುದುಗಿವುದು
ನಲಿವು ಮಾತಲಿ
ಸಲಿಗೆ ಮಾತಲಿ
ಛಲವು ಮಾತಲಿ ಹೊಮ್ಮವುದು
ಬಸವ ವೆಂದರೆ
ಮುಸುಕು ಸರಿಯುತ
ನಸುಕಲಿ ಬೆಳಕು ಮಿಂಚುವುದು
ದಸರ ಹಬ್ಬದ
ಖುಷಿಯ ಸಂಭ್ರಮ
ಬಸವ ಜನಿಸಿದ ದಿನವಿಂದು
ಅಣ್ಣಾ ಬಸವನು
ಜ್ಞಾನದ ನಿಧಿಯು
ಜ್ಞಾನ ದೀವಿಗೆ ಹಚ್ಚಿದನು
ಅಣ್ಣಾ ಹಾಕಿದ
ಜ್ಞಾನದ ಪಥಧಿ
ಜ್ಞಾನವಂತರೆ ಸಾಗೋಣ
ಈರಪ್ಪ ಬಿಜಲಿ
ಕೊಪ್ಪಳ
ಮೊ. ನಂ: 7019181570
ಪ್ರಕಟಣೆಗಾಗಿ ಸಂಪರ್ಕಿಸಿ:
ಇದು ವೆಬ್ ಸೈಟ್ ಮತ್ತು ಯ್ಯಾಪ. ಇದರಲ್ಲಿ ಪ್ರಕಟಣೆಗಾಗಿ ನಿಮ್ಮ ಕವನ, ಕಥೆ, ಪ್ರಬಂಧ, ಲೇಖನ ಹಾಗೂ ಪುಸ್ತಕ ವಿಮರ್ಶೆಗಳನ್ನು ಕಳುಹಿಸಬಹುದು.
WhatsApp No. 8310000414 ಗೆ ಕಳುಹಿಸಬಹುದು.
ಇದನ್ನೂ ಓದಿ: ಗಾಂಧಿ ನೇಯ್ದಿಟ್ಟ ಬಟ್ಟೆ
ಈಗಲೇ ವಾಟ್ಸಾಪ್ ಚಾನೆಲ್ ಫಾಲೋ ಮಾಡಿ: ಕ್ಲಿಕ್ ಮಾಡಿ