ಪಾಲ್ಗುಣ ಮಾಸದ ನಿರ್ಗಮನ
ನವ ಚೈತ್ರ ಮಾಸದ ಆಗಮನ
ಮಾಮರದಿ ಕೋಗಿಲೆಯ ಗಾನ
ಹಿಂದುಗಳ ಹೊಸ ವರ್ಷದ ಜನನ
ಬಾಗಿಲಿಗೆ ಮಾವಿನ ತೋರಣ
ಸಿಹಿ ಬೆಲ್ಲ ಬೆಳೆಯ ಹೂರಣ
ಸಿಹಿ ಮಾವು ಕಹಿಬೇವಿನ ಮಿಶ್ರಣ
ವರ್ಷದ ಮೊದಲ ಹಬ್ಬದ ಸಂಭ್ರಮಣ
ಬಂಧು ಬಾಂಧವರೆಲ್ಲ ಬೆರೆಯೋಣ
ಬದುಕಿನ ಕಹಿಯನ್ನೆಲ್ಲ ಮರೆಯೋಣ
ಸವಿ ನೆನಪಿನ ಸಿಹಿ ಎಲ್ಲೆಡೆ ಸಾರೋಣ
ನವಯುಗ ಒಂದನ್ನು ಸೃಷ್ಟಿಸೋಣ
ಗೆಳೆಯ ಗೆಳತಿಯರೆಲ್ಲಾ ಸೇರೋಣ
ಎಳೆಯ ಬಾಲ್ಯದ ಬುತ್ತಿ ಬಿಚ್ಚೋಣ
ಸ್ನೇಹದ ಸಾರವ ಎಲ್ಲೆಡೆ ಹಂಚೋಣ
ಸ್ನೇಹ ಪಾಶದಿ ಬಂದಿಯಾಗೋಣ
ಭವಿಷ್ಯದ ಪಂಚಾಂಗ ನೋಡೋಣ
ಹಳೆಯ ಕೊಳೆಯನ್ನು ತೊಳೆಯೋಣ
ಎಲ್ಲೆಲ್ಲೂ ಹೊಸ ಕಳೆ ತುಂಬೋಣ
ಹರ್ಷದ ಹೊನಲನ್ನು ಹೆಣೆಯೋಣ
ಅಕ್ಕರೆಯಿಂದ ಮಕ್ಕಳಿಗೆ ಕರೆಯೋಣ
ಸಕ್ಕರೆಯ ಸರವನ್ನು ಹಾಕೋಣ
ಬಾಳ ಸಿಹಿಯಾಗಲೆಂದು ಹರಸೋಣ
ಯುಗಾದಿ ಹಬ್ಬವ ಆಚರಿಸೋಣ
ಮಹಡಿಯನ್ನು ಏರಿ ಪೂಜಿಸೋಣ
ಗುಡಿ ಪಾಡವಾ ದೇವಿಗೆ ಸ್ಮರಿಸೋಣ
ಸುಖಸಮೃದ್ಧಿ ಕೊಡೆಂದು ಕೇಳೋಣ
ದೇವಿಗೆ ಬಾಗಿನಕೊಟ್ಟು ಕಳಿಸೋಣ
ಎರಡೇತ್ತಿನ ಬಂಡಿಯ ಹೂಡೋಣ
ಮೇಲೆ ಮುತ್ತಿನ ಚಪ್ಪರ ಹಾಕೋಣ
ರತ್ನದ ಗಂಬಳಿಯ ಹಾಸೋಣ
ಓಣಿ ಹೆಂಗಳೆಯರೆಲ್ಲ ಕೂಡೋಣ
ಜೋಳದ ಗೂಡನ್ನು ಮುರಿಯೋಣ
ಕುಣಿಯುತ ರಾಶಿಯು ಮಾಡೋಣ
ಅನ್ನದಾತ ರೈತನಿಗೆ ಹರಸೋಣ
ಈ ಯುಗಾದಿ ಹಬ್ಬವ ಸ್ಮರಿಸೋಣ
ಹಿಂದಿನ ಸಂಸ್ಕೃತಿ ಮರೆಯದಿರೋಣ
ಮುಂದಿನ ಪೀಳಿಗೆಗೆ ಹೇಳಿ ಕೊಡೋಣ
ಸನಾತನ ಹಬ್ಬ ಹರಿದಿನವ ಆಚರಿಸೋಣ
ಹಿರಿಯರಿಗೆ ಗೌರವ ಕೊಡುವುದು ಕಲಿಸೋಣ
ಈ ಯುಗಾದಿ ಹಬ್ಬವ ಸ್ಮರಿಸೋಣ ಸ್ಮರಿಸೋಣ…
ಶಿವಲೀಲಾ .ಎಸ್ .ಧನ್ನಾ
ಕಲ್ಬುರ್ಗಿ ಕಲ್ಯಾಣ ಕರ್ನಾಟಕ
ಪ್ರಕಟಣೆಗಾಗಿ ಸಂಪರ್ಕಿಸಿ:
ಇದು ವೆಬ್ ಸೈಟ್ ಮತ್ತು ಯ್ಯಾಪ. ಇದರಲ್ಲಿ ಪ್ರಕಟಣೆಗಾಗಿ ನಿಮ್ಮ ಕವನ, ಕಥೆ, ಪ್ರಬಂಧ, ಲೇಖನ ಹಾಗೂ ಪುಸ್ತಕ ವಿಮರ್ಶೆಗಳನ್ನು ಕಳುಹಿಸಬಹುದು.
WhatsApp No. 8310000414 ಗೆ ಕಳುಹಿಸಬಹುದು.