ಪದೇ ಪದೇ ಬುರುವುದು, ಬಾಲ್ಯದ ನೆನಪು
ಮತ್ತೇ ಸಿಗಲಾರದ, ಸವಿ ನೆನಪಿನ ಇಂಪು
ಮೇಲು ಕೀಲು, ಎನ್ನುವ ಭಾವನೆ ಇಲ್ಲ
ಬಡ, ಶ್ರೀಮಂತರೆಂಬ, ಭಾವ-ಬೇಧವಿಲ್ಲ
ಎಲ್ಲರೂ ಒಂದಾಗಿ ಆಟ ಆಡುವ ಮನಸ್ಸು
ಭಾವೈಕತೆಯನ್ನು ಎತ್ತಿ ತೋರಿಸುವ ಸೊಗಸು
ಕಣ್ಣು ಮುಚ್ಚಾಲೆ, ಆಟ ಎಷ್ಟು ಸುಂದರ
ಕುಂಟಿ -ಪಲ್ಲಿ, ಆಡುವುದೆ ಭಯಂಕರ
ಮಣ್ಣಿನಿಂದ ಮಾಡಿದ ಅಡುಗೆ ಸಾಮಾನುಗಳು
ಅದರಲ್ಲಿಯೇ ಅಡುಗೆ ಮಾಡಿ, ಬಡಿಸಿದ ನೆನಪುಗಳು
ಗೊಂಬೆಗಳನ್ನು ಸಿಂಗರಿಸಿ, ಮದುವೆ ಮಾಡುವುದು ಚಂದ
ಅಮ್ಮನಹಾಗೆ ಗೊಂಬೆಗಳಿಗೆ ಕೇಳುವುದು, ಏಕೆ ಅಳುವೇ ಕಂದ
ಎಷ್ಟು ಸಲ ಆಟದಲಿ ಬಿದ್ದು, ಎದ್ದರು ಆಗದ ನೋವು
ಸ್ನೇಹದ ಸೇಳತದಿಂದ, ಮರೆಯುವುದು ಮನವು
ಯಾವುದೇ ಹಬ್ಬ ಬತ್ತೇಂದರೆ, ಸಂಭ್ರಮ ಸಡಗರ
ತಿಂಡಿ-ತಿನುಸು, ಹೊಸ ಬಟ್ಟೆಗಳ ತೋಡುವ ಆತುರ
ಜೀವನದಲ್ಲಿ ಎಷ್ಟೋ, ದೊಡ್ಡರಾಗಿ ಬೆಳೆದರು
ಮರಳಿ ಪಡೆಯಲಾರೆವು, ಬಾಲ್ಯದ ಮೆರಗು
ಆ ದೇವರಲ್ಲಿ ಒಂದು ಪ್ರಾರ್ಥನೆ
ಮರಳಿಸಿ ಕೋಡು ಬಾಲ್ಯದ ವೇದನೆ
ಶ್ರೀ. ಶಂಕರ ಎಮ್. ಕಿಲ್ಲೇಕರ
ದಾಂಡೇಲಿ
ಪ್ರಕಟಣೆಗಾಗಿ ಸಂಪರ್ಕಿಸಿ:
ಇದು ವೆಬ್ ಸೈಟ್ ಮತ್ತು ಯ್ಯಾಪ. ಇದರಲ್ಲಿ ಪ್ರಕಟಣೆಗಾಗಿ ನಿಮ್ಮ ಕವನ, ಕಥೆ, ಪ್ರಬಂಧ, ಲೇಖನ ಹಾಗೂ ಪುಸ್ತಕ ವಿಮರ್ಶೆಗಳನ್ನು ಕಳುಹಿಸಬಹುದು.
WhatsApp No. 8310000414 ಗೆ ಕಳುಹಿಸಬಹುದು.