ಅಮ್ಮ ಎಂದರೆ ಮಮತೆ
ಅಪ್ಪ ಎಂದರೆ ಸುರಕ್ಷತೆ
ನಿನ್ನ ಬೆರಳು ನನ್ನ ಬೆರೆಳು
ಆಗಲೇ ಅನಿಸಿತು ನೀನೇ ನನಗೆ ನೆರಳು..!!
ಅಪ್ಪನ ಮಾತು ಒರಟು
ಮನಸ್ಸು, ಮಗುವಿನಷ್ಟೇ ಮೃದು,
ಜಗತ್ತು ಬದಲಾಗಬಹುದು
ಅಪ್ಪನ ವ್ಯಕ್ತಿತ್ವ ಬದಲಾಗಲಾರದು..!!
ಮಾತಿನಲ್ಲಿ ಪ್ರೀತಿ ತೋರದಾತ
ಕಣ್ಣಿನಲ್ಲೇ ಎಲ್ಲ ಹೇಳುವಾತ,
ಮುಂದಿನ ದಾರಿ ತೋರುತ
ನಡೆಸಿದ ಹಾದಿ ವಿರೋಚಿತ..!!
ಕೇಳದೆ ಎಲ್ಲವನ್ನು ಕೊಡಿಸುವ ಜೀವ
ಸ್ವಾರ್ಥತೆಯ ತದ್ವಿರುದ್ಧಾರೋಪವೇ ಈ ಜೀವ,
ತಂದೆ ನಮಗಾಗಿ ಪಟ್ಟ ಕಷ್ಟ
ನಮಗರ್ಥವಾಗದ ಪುಟ..!!
ಸರಳತೆಯ ಅಪರೂಪದ ಮಾಣಿಕ್ಯ
ನೊಂದ ಮನಕೆ ನವಚೈತನ್ಯ,
ಹೊರಗಿನ ಸಿಟ್ಟು, ಅವ್ವನ ಮೇಲೆ
ನಮ್ಮ ಸಿಟ್ಟು ನಿನ್ನ ಮೇಲೆ..!!
ಅಪ್ಪನಿಗೆ ಕಾಯಕವೇ ಜೀವನ
ಸದಾ ದುಡ್ಡಿನದೆ ಮನನ
ನಮ್ಮಿಂದ ದೂರವಾಗೇ ಇರುವವ
ಸದಾ ನಮಗಾಗೇ ಚಿಂತಿಸುವವ..!!
ರಹಿಮಾನ. ಖಾ. ನದಾಫ್
ವಿದ್ಯಾರ್ಥಿ,
ಸರಕಾರಿ ಪ್ರಥಮ ದರ್ಜೆ ಕಾಲೇಜು, ಇಲಕಲ್
ಬಾಗಲಕೋಟ. ಜಿಲ್ಲೆ
ಪ್ರಕಟಣೆಗಾಗಿ ಸಂಪರ್ಕಿಸಿ:
ಇದು ವೆಬ್ ಸೈಟ್ ಮತ್ತು ಯ್ಯಾಪ. ಇದರಲ್ಲಿ ಪ್ರಕಟಣೆಗಾಗಿ ನಿಮ್ಮ ಕವನ, ಕಥೆ, ಪ್ರಬಂಧ, ಲೇಖನ ಹಾಗೂ ಪುಸ್ತಕ ವಿಮರ್ಶೆಗಳನ್ನು ಕಳುಹಿಸಬಹುದು.
E-Mail ವಿಳಾಸ : Contact@Kannadabookpalace.Com
WhatsApp No. 8310000414 ಗೆ ಕಳುಹಿಸಬಹುದು.