ಎಲ್ಲಿ ಕಾಣಲಿ ಕುವೆಂಪು
ಕರುನಾಡಲ್ಲಿ ಇಲ್ಲದ ಕಂಪು
ರಾಷ್ಟ್ರಕವಿಯಿಲ್ಲದ ಕನ್ನಡ
ಹೃದಯ ಅಂತಿದೆ ಢವ ಢವ
ಮಿಡಿಯುತ್ತಿದೆ ಕನ್ನಡಿಗರ ಭಾವ
ಎಷ್ಟೊಂದು ತುಡಿತ ಕರುನಾಡಿನ ಜೀವ.
ಜ್ಞಾನ ಪೀಠದ ಚಂದನ ಭೂಮಿ ಬರಡಾಗಿದೆ
ಕನ್ನಡ ಬರಹದ ಪುಸ್ತಕ ಧೂಳು ಹಿಡಿದಿದೆ
ಕನ್ನಡದ ಕಣ್ಮಣಿ ಕಣ್ಣೆದುರಿಗಿಲ್ಲ
ಕನ್ನಡದ ಕಸ್ತೂರಿ ವಾಸನೆಯಿಲ್ಲ
ಸಾಹಿತ್ಯದ ಸಹ್ಯದಲ್ಲಿ ಭವ್ಯ ಮೆರೆದು ಹೋದಿರಿ
ಕಾವ್ಯದ ರಸ ಮಂಜರಿ ನೀಡಿ ರಾಷ್ಟ್ರ ಕವಿಯಾಗಿದ್ದೀರಿ
ಕುಪ್ಪಳ್ಳಿಯಲ್ಲಿ ಜನನ ಕರುನಾಡಿಗೆ ಪಾವನವಾದೀರಿ.
ಸಿರಿ ಸಂಪದದ ಕವನದಲ್ಲಿ
ಕನ್ನಡ ಈ ನೆಲದ ವೈಭವದಲ್ಲಿ
ವಿಶ್ವ ಮಾನವರಲ್ಲಿ ಒಬ್ಬರಾಗಿ
ವಿಶೇಷ ಮಾನವತ್ವದಲ್ಲಿ ಬೆಳೆದು ಕವಿಶೈಲರಾಗಿ ಮನದಲ್ಲಿ ಉಳಿದಿರಿ.
ಮತದ ಮಹತ್ವದಲ್ಲಿ ಮಾನವೀಯತೆಯ ಕಾಣಿಸಿರಿ
ಬಹುಮತದ ಮನುಷ್ಯತ್ವದಲ್ಲಿ ಎದೆಯ ದನಿಗೆ ನ್ಯಾಯ ಕೊಡಿ
ಎಂದು ಸಾರಿದ ನಮ್ಮ ಕುವೆಂಪು.
ಶ್ರೀಕಾಂತಯ್ಯ ಮಠ
ಲಿಂಗಸೂಗುರು ರಾಯಚೂರು ಜಿಲ್ಲೆ
ಪ್ರಕಟಣೆಗಾಗಿ ಸಂಪರ್ಕಿಸಿ:
ಇದು ವೆಬ್ ಸೈಟ್ ಮತ್ತು ಯ್ಯಾಪ. ಇದರಲ್ಲಿ ಪ್ರಕಟಣೆಗಾಗಿ ನಿಮ್ಮ ಕವನ, ಕಥೆ, ಪ್ರಬಂಧ, ಲೇಖನ ಹಾಗೂ ಪುಸ್ತಕ ವಿಮರ್ಶೆಗಳನ್ನು ಕಳುಹಿಸಬಹುದು.
E-Mail ವಿಳಾಸ : Contact@Kannadabookpalace.Com
WhatsApp No. 8310000414 ಗೆ ಕಳುಹಿಸಬಹುದು.