You are currently viewing ಕನ್ನಡ ರಾಜ್ಯೋತ್ಸವ

ಕನ್ನಡ ರಾಜ್ಯೋತ್ಸವ

ಕನ್ನಡ ರಾಜ್ಯೋತ್ಸವ

ಕನ್ನಡದ ತೇರು ಮುನ್ನಡೆಯಲಿ
ಎಲ್ಲೆಲ್ಲೂ ಹಬ್ಬದ ಸಡಗರವಿರಲಿ

ಸಿರಿಗನ್ನಡ ನಾಡು ಸಮೃದ್ಧಿಯ ಕಾಣಲಿ
ಪ್ರತಿಯೊಬ್ಬ ಕನ್ನಡಿಗನು ನಲಿಯಲಿ

ಕರುನಾಡಿನ ಈ ಶುಭದಿನದಲಿ
ಎಲ್ಲರ ಮನವು ಒಂದಾಗಿರಲಿ

ಅರವತ್ತೇಳರ ನವೋಲ್ಲಾಸ
ಸಪ್ತಕೋಟಿ ಕಂಠದ ಉಲ್ಲಾಸ

ಅಮರ ಗಾಯಕರ ಸ್ಮರಿಸೋಣ
ಕುವೆಂಪು, ಬೇಂದ್ರೆಯ ನೆನೆಯೋಣ

ಮಲೆನಾಡು, ಕರಾವಳಿ, ಬಯಲುಸೀಮೆ
ಎಲ್ಲವೂ ಒಂದೇ ತಾಯಿ ಮಕ್ಕಳು ಇಲ್ಲ

ಗಂಡುಮೆಟ್ಟಿದ ನಾಡಿದು
ಸಾಹಸದ ಕಲಿಗಳ ಬೀಡಿದು

ಹಳದಿ-ಕೆಂಪು ಬಾವುಟ ಹಾರಾಡಲಿ
ಕನ್ನಡದ ಕೀರ್ತಿ ಬಾನಿಗೆ ಏರಲಿ

ಕಾವೇರಿ, ಕೃಷ್ಣೆ, ತುಂಗಭದ್ರೆಯ
ನೀರು ನಾಡಿನ ಸಂಪತ್ತನು ಹೆಚ್ಚಿಸಲಿ

ನೃಪತುಂಗನ ನಾಡು, ಪಂಪನ ಬೀಡು
ಚೆನ್ನಬಸವಣ್ಣನ ಧರ್ಮದ ಹಾಡು

ಸಂಸ್ಕೃತಿ, ಪರಂಪರೆಯ ಸಿರಿಯು ನಮ್ಮದು
ಇದನ್ನು ಉಳಿಸಿ, ಬೆಳೆಸುವುದು ಜವಾಬ್ದಾರಿ ನಿಮ್ಮದು

ನುಡಿಹಬ್ಬವಿದು, ನೆನಪಿನ ದಿನವಿದು
ಕನ್ನಡ ತಾಯಿಗೆ ಕೈ ಮುಗಿಯುವ ಕ್ಷಣವಿದು

“ಸತ್ಯವೇ ನಮ್ಮ ತಾಯಿ, ಧರ್ಮವೇ ನಮ್ಮ ತಂದೆ” ಎಂದು ಸಾರೋಣ

ಕರುನಾಡಿನ ನೆಲ-ಜಲವ ಕಾಪಾಡಲು ಪ್ರತಿಜ್ಞೆ ಮಾಡೋಣ
ಸಿರಿಗನ್ನಡಂ ಗೆಲ್ಗೆ, ಸಿರಿಗನ್ನಡಂ ಬಾಳ್ಗೆ!

ಉಷಾ ಕಿರಣ್