ಕನ್ನಡದ ಮಾತು ಸವಿಜೇನಿನ ಮುತ್ತು
ಕನ್ನಡದ ಅಕ್ಷರ ನಮ್ಮ ಸ್ವತ್ತು
ನಮ್ಮ ಭಾಷೆಯಲ್ಲಿದೆ ಗಾಂಭೀರ್ಯ ಗತ್ತು
ನಮ್ಮ ನಾಡು ನಿಂತಿದೆ ಇತಿಹಾಸ ಹೊತ್ತು
ಇದಕ್ಕೆ ಎರಡು ಸಾವಿರ ವರ್ಷಗಳ ಹಿನ್ನೆಲೆ ಇತ್ತು
ನವೋದಯ ನವ್ಯ ಪ್ರಗತಿಶೀಲ ಸಾಹಿತ್ಯ ಹೊಂದಿದೆ
ಪಂಪ ರನ್ನ ಪೊನ್ನ ಜನ್ನರ ಕೀರ್ತಿ ಇಲ್ಲಿ ಬೆಳಗಿದೆ
ವಚನಗಳಿಂದ ವಚನಾಮೃತ ಗಹಗಹಿಸಿ ಕೇಳಿದೆ
ಬಸವ ಅಲ್ಲಮ ಅಕ್ಕನ ವಚನಗಳು ಮೇಳೖಸಿದೆ
ದಾಸ ದಾಸ ದಾಸ ಎಂದು ದಾಸ ಸಾಹಿತ್ಯ ಮೆರೆದಿದೆ
ಕನಕ ಪುರಂದರ ವ್ಯಾಸರಿಂದ ಕೀರ್ತನೆ ಕಣ್ಣು ತೆರೆದಿದೆ
ಕುವೆಂಪುರಿಂದ ಕಂಬಾರರವರೆಗೆ ಸಾಹಿತ್ಯ ಲೋಕ ಗೌರವ ಪಡೆದಿದೆ
ಎಂಟು ಜ್ಞಾನಪೀಠ ಕನ್ನಡದ ಮುಡಿಗೇರಿದೆ.
ಓ ಕನ್ನಡದ ಕಂದ
ತಿಳಿಯೋ ನೀ ಕನ್ನಡದ ಬಂಧಾ
ನಿನಗಿದೆ ಈ ನಾಡಿನ ಋಣಾನುಬಂಧ
ತೀರಿಸುವ ಮಗನಾಗು ಈ ಕ್ಷಣದಿಂದ
ಜೈ ಕನ್ನಡಾಂಬೆ
ಸವಿತಾ ಚರಂತಿಮಠ
ಹಿರೇಬಾಗೇವಾಡಿ
ಬೆಳಗಾವಿ