ಗಾಂಧೀಜಿ ಕಂಡದ್ದು
ರಾಮ ರಾಜ್ಯದ ಕನಸು
ಮತ್ತೊಮ್ಮೆ ಹುಟ್ಟಿ
ಬರಬೇಕು
ಆಗಲು ನನಸು
ಗಾಂಧೀ ಸೀಟು ಗಾಂಧೀ ಟೋಪಿ
ಎಂದು ಗೇಲಿ ಮಾಡುವರೆಲ್ಲ
ಗೇಲಿಮಾಡುವ ಬಾಯಿಗೆ
ಆಹಾರವಾಗಿ ಬಿಟ್ಟರಲ್ಲ
ಹನ್ನೆರಡು ಗಂಟೆ ರಾತ್ರಿ ಹೊತ್ತಲ್ಲಿ
ಹೆಣ್ಣೊಬ್ಬಳೆ ನಡೆಯಬೇಕೆಂದರು
ಹಗಲು ಹೊತ್ತಲ್ಲೇ ಕಾಮುಕರು ನಿನ್ನ
ಬಿಡುವುದಿಲ್ಲವೆಂದರು
ಇಂದಿನ ದಿನಗಳಲಿ
ಗಾಂಧೀಜಿಯವರು ಇದ್ದಿದ್ದರೆ
ಘೋಡ್ಸೆಗೆ ಕೊಲ್ಲಲು
ಇರುತ್ತಿರಲಿಲ್ಲ ತೊಂದರೆ
ಅವರೇ ನೇಣುಬಿಗಿದು
ಮರಣವನ್ನಪ್ಪುತಿದ್ದರು ಖರೆ
ನೋಡಲಾಗುತ್ತಿತ್ತೇ
ಈ ಹದಗೆಟ್ಟ ಸಮಾಜದ ತಿರೆ
ಗಳಿಸಿ ಕೊಟ್ಟ ಸ್ವಾತಂತ್ರ್ಯ
ಅರ್ಥಗೆಡಿಸಿದರು
ಈಗಲೂ ಅಧೀನದಲ್ಲಿಡಬೇಕಿತ್ತು
ಪರಂಗಿಯವರು
ಬುದ್ದಿಕಲಿಯುವ ಮಂದಿ
ಯಾರಿಲ್ಲ ಇಲ್ಲಿ
ಬದ್ದಿ ಕೆಡಿಸಿಕೊಂಡವರೇ
ಇರುವರು ನೋಡಿಲ್ಲಿ
ಜಯಂತಿಯ ಮಾಡಿ
ಹಾಡಿ ಹೊಗಳುವರು
ನೀ ಹಾಕಿಕೊಟ್ಟ ನ್ಯಾಯ
ನೀತಿ ಧರ್ಮದಲಿ ನೆಡೆಯದವರು
ನಂದಾ ಪ್ರೇಮಕುಮಾರ್
ಶಿಕಾರಿಪುರ