ಸ್ವತಂತ್ರ ದೇಶದ ಕನಸು ಹೊತ್ತ
ಅಸಂಖ್ಯಾತ ಸತ್ಯಾಗ್ರಹಗಳ ಸುತ್ತ
ಹೋರಾಡಿದ ವೀರ ಅನವರತ.
ದೇಶ ರಕ್ಷಣೆಗೆ ತನು ಮನವ ಮುಡಿಪಾಗಿಟ್ಟ…!
ಪರಕೀಯರನ್ನು ಅಹಿಂಸೆಯಿಂದ ಕೆಣಕಿ
ಪರದೇಶಿಗಳ ಪಲಾಯನ ಬಯಸಿ
ದೇಶಪ್ರೇಮ ಮೆರೆದ ನಾಯಕ
ಸ್ವಾತಂತ್ರ್ಯಕ್ಕಾಗಿ ನಡೆಸಿದ ಘೋಷಗಳ ಪ್ರಚಾರಕ…!
ಅನ್ಯರ ಆಗಮನದಿ ನೊಂದು
ಭೂ ಮಾತೆ ತನ್ನೊಡಲಲಿ ಬೆಂದು
ಸಹಿಸದೆ ಅಸಹಕಾರ ನೀಡಿದ ಬಂಧು
ಆಂಗ್ಲರ ಸವಿನಯ ಭಂಗ ಮಾಡಿದ ಹಿಂದೂಸ್ತಾನದ ಸಿಂಧೂ…!
ವರ್ಣಬೇಧ ನೀತಿ ಅಳಿಸಿದ
ಭಾರತ ದೇಶದ ಅಗ್ರ ಸುತ
ಮಕ್ಕಳೆಲ್ಲರು ಕರೆವರು ಗಾಂಧಿ ತಾತ
ದೇಶವೇ ಕೂಗಿ ಹೇಳಿದೆ
ರಾಷ್ಟ್ರ ಪಿತ….!
ಸವಿತಾ ದೇಶಪಾಂಡೆ