ಕರ್ನಾಟಕದ “ಬಾಡ”ನಲ್ಲಿ ಹುಟ್ಟಿದ
ಬಚ್ಚಮ್ಮ ಬೀರಪ್ಪರ ಪುತ್ರನೀತ ,
ತಂದೆ ತಾಯಿಯರ ಆರಾಧ್ಯ ದೈವ
ವೆಂಕಟೇಶ್ವರರ ವರಪುತ್ರನೀತ ,
ಅಕ್ಷರಾಭ್ಯಾಸದ ಜೊತೆಗೆ
ಕುದುರೆ ಸವಾರಿ
ಕತ್ತಿ ಒರಸೆ ಕಲಿತ ತಿಮ್ಮಪ್ಪನಾಯಕನೀತ,
ತಂದೆ ತಾಯಿಯರ ಮರಣ ನಂತರ
ನಾಯಕ ಪಟ್ಟ ಅಲಂಕರಿಸಿದ ನೀತ,
ಒಂದೇ ಜಾತಿಗೆ ಜೋತು ಬೀಳದೆ
ಜಾತಿ ವ್ಯವಸ್ಥೆಯ ವಿರುದ್ಧ ಸಮರ ಸಾರಿದಾತ,
ಕುಲ ಕುಲ ವೆಂದು ಹೊಡೆದಾಡದಿರೆ೦ಬ ಸಂದೇಶ ನೀಡಿದಾತ ,
ವ್ಯಾಸರಾಯರ ಮೆಚ್ಚಿನ ಶಿಷ್ಯ
ಉಡುಪಿ ಕೃಷ್ಣನ ಅನನ್ಯ ಭಕ್ತ ನೀತ,
ದಂಡನಾಯಕನಾದ ಈತ
ವೈರಾಗ್ಯವ ಪಡೆದು ಹರಿದಾಸ ನಾದ ನೀತ,
ಕೀರ್ತನೆ ಉಗಾಭೋಗಗಳು
ಕನ್ನಡ ಲೋಕಕ್ಕೆ ಅರ್ಪಣೆ ಮಾಡಿದಾತ ,
ಕೀರ್ತನಕಾರ ಜನಪ್ರಿಯ ಹರಿದಾಸ
ಕವಿ ಸಂತ ತತ್ವಜ್ಞಾನಿಯಾಗಿ ಮೆರೆದಾತ ನಿಮಗೊಂದು ಶರಣು.
ಹೆಚ್.ಆರ್. ಬಾಗವಾನ
ಶಿಕ್ಷಕರು, ಮುದ್ದೇಬಿಹಾಳ.