
ಕನ್ನಡ ರಾಜ್ಯೋತ್ಸವ ವಿಶೇಷ
ಹೆಚ್. ಆರ್. ಬಾಗವಾನ
ಉದಯಿಸಿತು ಚೆಲುವ ಕನ್ನಡ ನಾಡು
ಕರುನಾಡೆಂಬ ಹೆಮ್ಮೆಯಬೀಡು
ಚದುರಿದ್ದು ಕನ್ನಡ ಕರ್ನಾಟಕ ವೆಂದಾಯ್ತು
ಆಲೂರ ವೆಂಕಟರಾವರ ಶ್ರಮವು ಫಲಿಸಿತು.
ಭುವನೇಶ್ವರಿಯ ಭವ್ಯ ಮೆರವಣಿಗೆಯ ಮಾಡಿ
ಚರ್ಚೆ, ಗೋಷ್ಠಿ, ಶಿಬಿರ, ಸಮಾರಂಭಗಳ ಲ್ಲೊಡಗೂಡಿ
ಕಂಪನು ಹರಡುತಾ ಎಲ್ಲೆಡೆ ಕನ್ನಡದ
ಹೆಸರು ಉಸಿರಾಯ್ತು ಕನ್ನಡ ಕಣಕಣದಲಿ
ಅರಿಷಿಣ ಕಲಂಕುಮದ ಸೂಚ
ಹಳದಿ ಕೆಂಪು ಬಣ್ಣಗಳ ಕನ್ನಡಾಂದೆಗೆ ಬಳಸಿ
ಶಾಂತಿ ಕ್ರಾಂತಿಯ ಸಂದೇಶ ಕರುನಾಡಲ್ಲಿ ಸಾರುತ್ತಾ
ಬಾವುಟದರಿವು ಮಾಡಿಸಿದ ಎಂ ರಾಮಮೂರ್ತಿಯರ ನೆನೆಯೋಣ
ಜಾತಿ, ಮತ ಪಂಥಗಳ ಭೇದವಿಲ್ಲದೇ
ಜಯಭಾರತ ಗೀತಗಾಯನ ಪಾಡಿ
ಕನ್ನಡ ನಾಡು, ನುಡಿ, ಜಲಕಾಗಿ ಶ್ರಮಿಸಿದ
ಮಹನೀಯರ ಸ್ಮರಿಸಿ ಗೌರವಿಸುವ ಸುದಿನ
ಕನ್ನಡ ನಿಘಂಟಿನ ಭಾಷೆಯೊಂದಾದರೆ
ಶಾಸ್ತ್ರೀಯ ಭಾಷೆಗಳಲ್ಲೊಂದು ಕನ್ನಡ
ವಿಶ್ವಕೋಶ ಲಾಂಧನದಲ್ಲೂ ಕನ್ನಡ
ದಾಸ ವಚನ ಸಾಹಿತ್ಯ ಬೆಳೆಸಿ ಬೆಳಗಿದ ಕನ್ನಡ
ವಿಶ್ವೇಶ್ವರಯ್ಯ ಕಲಾಮರಂತಹ ವಿಜ್ಞಾನಿಗಳ ಕಂಡ ಕರುನಾಡು
ಖಾದಿ, ರೇಷ್ಮೆ, ಚಂದನಗಳ ಭವ್ಯದಾಗರವೀ ಬಿಡು
ಓಪ್ಪು ಸುಲ್ತಾನ, ಮೈಸೂರು ಒಡೆಯರಾಳಿದ ನಾಡು
ಚನ್ನಮ್ಮ, ಅಬ್ಬಕ್ಕ, ಮಲ್ಲಮ್ಮ, ರಾಯಣ್ಣರು ಜನಿಸಿದ ಬಿಡು
ದೇಶ ಭಾಷೆ ಸಂಸ್ಕೃತಿ ಒಂದೆಂಬ ಘೋಷಣೆಯಲಿ
ಆಡಗಿದೆ ಅಪಾಯ ಎಂಬ ಅರುಹಿನಲಿ
ಅನ್ಯ ಭಾಷೆಗಳ ಹೇರಿಕೆ ವ್ಯರ್ಥವೆಂದರಿತು
ಕನ್ನಡದ ಕಂಪನ್ನು ಎಲ್ಲೆಡೆಗೂ ಸೂನು
ಶ್ರಮ, ದುಡಿಮೆ, ಬೆವರು ನಮ್ಮದು
ಒಡೆತನ ಯಾರದ್ದೋ ಎಂದರೇನರ್ಥ?
ಕನ್ನಡದ ಅಸ್ತಿತ್ವ ಅಸ್ಥಿಯಂತೆ
ಹೂತು ಹೋಗುವುದು ನಿಜವಾಗಿಯೂ ವ್ಯರ್ಥ.
– ಹೆಚ್. ಆರ್. ಬಾಗವಾನ
ಶಿಕ್ಷಕರು.
-
ಹೃದಯ ಸಿಂಹಾಸನದಲ್ಲಿ
ಗಜ಼ಲ್ ಸಂಕಲನ (Ghazal collection)₹100.00Original price was: ₹100.00.₹90.00Current price is: ₹90.00.
ಪ್ರಕಟಣೆಗಾಗಿ ಸಂಪರ್ಕಿಸಿ
ಇದು ವೆಬ್ ಸೈಟ್ ಮತ್ತು ಯ್ಯಾಪ. ಇದರಲ್ಲಿ ಪ್ರಕಟಣೆಗಾಗಿ ನಿಮ್ಮ ಕವನ, ಕಥೆ, ಪ್ರಬಂಧ, ಲೇಖನ ಹಾಗೂ ಪುಸ್ತಕ ವಿಮರ್ಶೆಗಳನ್ನು ಕಳುಹಿಸಬಹುದು.
e-mail ವಿಳಾಸ : contact@kannadabookpalace.com
ಅಥವಾ WhatsApp No. 8310000414 ಗೆ ಕಳುಹಿಸಬಹುದು.