ಬಳಗದ ನಿತ್ಯ ನಿರಂತರ ಸಾಹಿತ್ಯ ಸೇವೆ ಹೀಗೆ ನಗುತಿರಲಿ.
ಕೊಳದ ಸತ್ಯ ಸ್ಫಟಿಕದ ನೀರಿನಂತೆ ಸ್ಪರ್ಧೆಗಳು ತೂಗುತಿರಲಿ.
ಎಲ್ಲಿಂದಲೋ ಬಂದವರೆಲ್ಲ ಇಲ್ಲಿಯೆ ನಿಂದು ಸಲ್ಲುತಿಹರಲ್ಲವೇ
ಇದ್ದಲ್ಲಿಂದಲೇ ಅಕ್ಷರ ಬೀಜಗಳ ಬಿತ್ತುತ ಬೆಳೆಯಲಿ ಬೀಗುತಿರಲಿ .
ಕಲಿಯುವ ಅತಿಯಾಸೆಯ ನೆಲೆಯ ಅರಸುತ್ತಾ ಸೇರಿಹರು.
ಅಲೆಯುವ ಸಂಚಾರಿಗೂ ಬರೆಹದ ಗೀಳು ನಿಜದಿ ತಾಗುತಿರಲಿ.
ಇರದಿರೆ ಶಬ್ದ ಭಂಡಾರವು ಹೆದರದೆ ಬಳಗದಿ ಇಣುಕಿ ನೋಡಿ.
ಬರದಿರೆ ಭಾವಾವೇಶ ಸುಮ್ಮನೆ ಸುತ್ತುತ ಒಳಗೆ ಒಮ್ಮೆ ಮಾಗುತಿರಲಿ.
ವಿವಿಧ ಕಾವ್ಯ ಪ್ರಕಾರಗಳ ತಿಳಿಯುತ ಜಯಳಿಗೆ ಹರುಷವು
ಸುಲಿದ ಬಾಳೆಹಣ್ಣಿನಂದದಿ ದಿನವೂ ಮನದಿ ಸಂಪ್ರೀತಿ ಕೂಗುತಿರಲಿ.
ಜಯಶ್ರೀ ಭ ಭಂಡಾರಿ
ಬಾದಾಮಿ