ಕಾರ್ಮಿಕ ಕಾನೂನುಗಳ ಅರಿವು
Out of stock
₹180.00
Author : ಹುಸೇನಸಾಬ ವಣಗೇರಿ ಮತ್ತು ಡಾ. ರೇಣುಕಾ ಈ. ಅಸಗಿ
PUBLISHERS Name: Husenasab Vanageri
Out of stock
All India Shipping
Timely Arrival:
5–10 Days
To Your Doorstep
Secure Payments
UPI • Cards • Net Banking
100% Safe & Secure
Free Shipping
On Orders Above
₹999
share This book
Book Description
ಕಾರ್ಮಿಕ ಕಾನೂನುಗಳ ಅರಿವು ಎಂಬ ಕೃತಿಯನ್ನು ಹೊರ ತರುತ್ತಿರುವ ನನ್ನ ಪ್ರೀತಿಯ ವಿದ್ಯಾರ್ಥಿ ಶ್ರೀ ಹುಸೇನಸಾಬ ವಣಗೇರಿ ಮತ್ತು ಸಮಾಜ ಕಾರ್ಯ ಅಧ್ಯಯನ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಡಾ. ರೇಣುಕಾ ಈ. ಆಸಗಿ ಅವರಿಗೆ ಪ್ರಪ್ರಥಮವಾಗಿ ಹೃದಯ ಪೂರ್ವಕವಾಗಿ ಅಭಿನಂದಿಸುತ್ತೇನೆ.
ಕಾರ್ಮಿಕ ಕಾನೂನುಗಳು ಬಹಳಷ್ಟು ಸ್ಪಷ್ಟಕರವಾಗಿದ್ದು, ವಿದ್ಯಾರ್ಥಿಗಳು ಹಾಗೂ ಜನಸಾಮಾನ್ಯರು ಅವುಗಳನ್ನು ಅರ್ಥೈಸಿಕೊಳ್ಳುವುದು ತುಂಭಾ ಕಷ್ಟದ ಕೆಲಸ. ಅಂತಹ ಕಶಿಣವಾದ ಕಾರ್ಮಿಕ ಕಾನೂನುಗಳನ್ನು ಮಾತೃ ಭಾಷೆಯಲ್ಲಿ ಸರಳವಾಗಿ, ಎಲ್ಲರಿಗೂ ಅರ್ಥವಾಗುವ ರೀತಿಯಲ್ಲಿ ಈ ಕೃತಿ ರಚಿತವಾಗಿದ್ದು, ಮಾನವ ಸಂಪನ್ಮೂಲ ಕಾರ್ಮಿಕರಿಗೆ ಕಾನೂನುಗಳ ಕುರಿತು ತಿಳಿದುಕೊಳ್ಳಲು ಮತ್ತು ದಿನನಿತ್ಯದ ಕಾರ್ಮಿಕ ಆಡಳಿತದಲ್ಲಿ ಕಾರ್ಮಿಕ ಕಾನೂನುಗಳು ಬಹು ಮುಖ್ಯವಾಗಿರುವುದರಿಂದ ಅವುಗಳನ್ನು ಕಳಕಳಿ, ಆರೋಗ್ಯ, ಸ್ವಚ್ಛತೆ ಮತ್ತು ಭದ್ರತೆಯ ಬಗ್ಗೆ ಇರುವ ಸಹಾನುಭೂತಿಯನ್ನು ಎತ್ತಿ ತೋರಿಸುತ್ತದೆ. ವ್ಯವಸ್ಥಾಪಕರಿಗೆ, ಮಾನವ ಸಂಪನ್ಮೂಲ ನಿರ್ವಹಣೆಯ ಪ್ರಶಿಕ್ಷಣಾರ್ಥಿಗಳಿಗೆ ಮತ್ತು ಅರ್ಥೈಸಿಕೊಳ್ಳಲು ಸಹಾಯಕವಾಗಲಿದೆ. ಈ ಆಕರವು ಕಾರ್ಮಿಕರ ಬಗೆಗಿನ ಕಾಳಜಿ,
ಈ ಕೃತಿಯಲ್ಲಿ ಲೇಖಕರು ಕಾರ್ಮಿಕ ಕಾನೂನುಗಳ ಅಗತ್ಯ ಮಾಹಿತಿಯನ್ನು ಒದಗಿಸುವ ಪ್ರಯತ್ನ ಮಾಡಿದ್ದು, ಕಾರ್ಮಿಕ ಕಾನೂನುಗಳ ಉದ್ದೇಶಗಳು, ತತ್ವಗಳು, ಭಾರತದಲ್ಲಿ ಕಾರ್ಮಿಕ ಆಡಳಿತ, ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯದ ಕಾರ್ಯಗಳು, ಕಾರ್ಖಾನೆಗಳು, ಬಾಯ್ಸರ್ಗಳು, ಕೈಗಾರಿಕಾ ಸುರಕ್ಷತೆ ಮತ್ತು ಆರೋಗ್ಯ ಇಲಾಖೆಯ ಉದ್ದೇಶಗಳು, ಸೇವೆಗಳು, ಅಂತರರಾಷ್ಟ್ರೀಯ ಕಾರ್ಮಿಕ ಸಂಸ್ಥೆಯ ಉದ್ದೇಶಗಳು, ಕಾರ್ಯಗಳು, ಕಾರ್ಮಿಕ ಕಲ್ಯಾಣ ಅಧಿಕಾರಿಯ ಕರ್ತವ್ಯಗಳು, ಕಾರ್ಯಗಳು, ಕಾರ್ಮಿಕ ಕಲ್ಯಾಣ ಕಾನೂನುಗಳು, ಉದ್ಯೋಗ ಮತ್ತು ಕೈಗಾರಿಕಾ ಸಂಬಂಧಗಳ ಕಾನೂನುಗಳು, ವೇತನ ಮತ್ತು ಸಂಭಾವನೆಯ ಕಾನೂನುಗಳು, ಸಾಮಾಜಿಕ ಭದ್ರತೆ ಮತ್ತು ಪ್ರಯೋಜನಗಳ ಕಾನೂನುಗಳಿಗೆ ಸಂಬಂಧಿಸಿದಂತ ಮಾಹಿತಿಯನ್ನು ಒಳಗೊಂಡಿರುವುದರಿಂದ ಈ ಕೃತಿಯು ಎಲ್ಲರಿಗೂ ಉಪಯುಕ್ತವಾಗಲಿದೆ. ವೇತನ ಮತ್ತು ಸಂಭಾವನೆಯ ಕಾನೂನುಗಳು, ಸಾಮಾಜಿಕ ಭದ್ರತೆ ಮತ್ತು
ಕಾರ್ಮಿಕ ಕಾನೂನುಗಳಿಗೆ ಸಂಬಂಧಿಸಿದಂತೆ ಕನ್ನಡದಲ್ಲಿ ಆಕರ ಗ್ರಂಥಗಳ ಕೊರತೆಯಿದ್ದು, ಕನ್ನಡ ಮಾಧ್ಯಮ ವಿದ್ಯಾರ್ಥಿಗಳಿಗೆ ಅನುಕೂಲವಾಗುವ ರೀತಿಯಲ್ಲಿ ಎಲ್ಲಾ ವಿಶ್ವವಿದ್ಯಾಲಯಗಳ ಪಠ್ಯಕ್ರಮವನ್ನು ಗಮನದಲ್ಲಿ ಇಟ್ಟುಕೊಂಡು ಮಾಹಿತಿಯನ್ನು ಕ್ರೋಡಿಕರಿಸಿ ಈ ಕೃತಿಯನ್ನು ರಚಿಸಿರುವುದರಿಂದ ಲೇಖಕರ ಶ್ರಮ ಸಾರ್ಥಕವಾಗಿದೆ ಎಂದು ಭಾವಿಸುತ್ತೇನೆ. ನಾಡಿನ ಸಮಸ್ತ ಓದುಗ ಮಿತ್ರರು, ವಿದ್ಯಾರ್ಥಿಗಳು, ಉಪನ್ಯಾಸಕರು, ಮತ್ತು ಕಾರ್ಮಿಕರು ಪಡೆದುಕೊಳ್ಳಬೇಕೆಂದು ಶುಭ ಹಾರೈಸುತ್ತೇನೆ. ಇದರ ಸದುಪಯೋಗವನ್ನು
ಡಾ. ಸರಿಗೀತಾ ಆರ್. ಮಾನೆ
ಪ್ರಾಧ್ಯಾಪಕರು ಮತ್ತು ಮುಖ್ಯಸ್ಥರು
ಸಮಾಜ ಕಾರ್ಯ ಅಧ್ಯಯನ ಮತ್ತು ಸಂಶೋಧನಾ ವಿಭಾಗ
ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ




Reviews
There are no reviews yet.