ಜನಪ್ರಿಯ ಲೋಕಪ್ರಿಯ
₹99.00
ಜಯಿಸುವವನಿಗೆ ಜಗತ್ತಿನ ಯಾವ ಮೂಲೆಯಲ್ಲೂ ಜಾಗದಿದೆ
Author : ರಾಜ್ ಮುರಳಿ (ಮಂಜು.ಪಿ.)
Publishers Name : ಐಸಿರಿ ಸಿನಿಮಾ ಪ್ರೊಡಕ್ಷನ್
All India Shipping
Timely Arrival:
5–10 Days
To Your Doorstep
Secure Payments
UPI • Cards • Net Banking
100% Safe & Secure
Free Shipping
On Orders Above
₹999
share This book
Book Description
ಬರೆಯುವ ಕೈಗಳಿಗೆ ಶಕ್ತಿ ನೀಡುವ ಕೈ, ಓದುವ ಮನಸ್ಸಾಗಳಿಲ್ಲದಿದ್ದರೆ, ಬರೆಯುವ ಕೈಗಳು ಧೈರ್ಯ ಕಳೆದುಕೊಳ್ಳುತ್ತವೆ.”
“ಶ್ರೀಯುತ ಶ್ರೀನಿವಾಸ್ ಮಾರಪ್ಪ” ನವರು ಸ್ವಾತಂತ್ರ್ಯ ಪೂರ್ವದಲ್ಲಿ ಓರ್ವ ಪ್ರತಿಭಾವಂತ ಚಿರಯುವಕನಿಗೆ ತನ್ನ ಉನ್ನತ ಶಿಕ್ಷಣಕ್ಕಾಗಿ, ಆತನಿಗೆ ಬಡತನ ಅಡ್ಡ ಬರುತ್ತಿತ್ತು, ತನ್ನ ಪ್ರಾಂತ್ಯದ ರಾಜರ ಬಳಿ ಸಹಾಯ ಹಸ್ತ ಕೋರಿ ಕೈಚಾಚಿದಾಗ, ದೊರೆ. ಆತನ ಕಣ್ಣುಗಳಲ್ಲಿದ್ದ ತೇಜಸ್ಸನ್ನು ಮನಗಂಡು ವಿದ್ಯಾಭ್ಯಾಸದ ಖರ್ಚು – ವೆಚ್ಚಗಳನ್ನು ಭರಿಸಿದರು, ಅಂದು ಅವರಿಗೇ ತಿಳಿದಿರಲಿಲ್ಲ, ಈ ಯುವಕನೇ ಭವ್ಯ ಶರತದ “ಭಾರತರತ್ನ” ಶಿಕ್ಷೆಯಾಗುತ್ತಾರೆಂದು. ಅವರೇ “ಬಾಬಾಸಾಹೇಬ್ ಅಂಬೇಡ್ಕರ್”.
ಎಲ್ಲೋ ಕುಳಿತು ಬರೆದಂತಹ ಪುಸ್ತಕವಿದು. ಇದನ್ನ ನಾನೋರ್ವ ಸಾಧಕರ ಬಳಿಯಲ್ಲಿ ಕೊಂಡೊಯ್ದೆ. ಸಮಾಜ ಸೇವೆ ಮಾಡುವುದಕ್ಕೆ ದಾರಿ ನೂರಾರು, ಕೆಲವರ ಆಯ್ಕೆ ಒಂದೋ ಎರಡೋ, ಆದರೆ ಇವರು ಇರುವ ನೂರಾರು ದಾರಿಗಳನ್ನು ಬಳಸಿಕೊಳ್ಳುತ್ತಾರೆ. ಅದಕ್ಕೆ ಈ “ಜನಪ್ರಿಯ ಲೋಕಪ್ರಿಯ” ಪುಸ್ತಕ ತಯಾರಿಕೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿರುವುದು ಪ್ರತ್ಯಕ್ಷ ಸಾಕ್ಷಿ.
ಒಂದು ಸಣ್ಣ ಗೃಹ ನಿರ್ಮಿಸಲು ಸ್ವಲ್ಪ ಸಮಯ ಸಾಕು, ದೇಶವನ್ನೇ ಕಟ್ಟಲು ಸಾಕಷ್ಟು ಸಮಯ ಬೇಕು, ಜೊತೆಗೆ ಉತ್ತಮ ಪ್ರಜೆಗಳ ಸಹಕಾರ ಬೇಕು, ದೇಶ ಯುವಕರ ಬೆನ್ನ ಮೇಲಿರಬೇಕು, ಯುವಕರಲ್ಲಿ ಬಿಸಿ ರಕ್ತ – ಧೈರ್ಯ, ಹುಮ್ಮಸ್ಸು. ಸಾಮರ್ಥ್ಯ, ಶಕ್ತಿ ಅಡಕವಾಗಿರಬೇಕು, ಇಂತಹ ಯುವಕರನ್ನು ತಯಾರಾ ಮಾಡುವುದು ಹಿರಿಯರಾದರೆ, ಯುವಕರಿಗೆ ಬೆಂಬಲ ನೀಡುವ ವ್ಯಕ್ತಿ ಇವರೇ, ದೇಶದ ಯುವಜನತೆಯ ಭವಿಷ್ಯದ ಬಗ್ಗೆ ಚಿಂತಿಸುವ, ಅದಕ್ಕಾಗಿ ದುಡಿಯುವ, ದೂರದೃಷ್ಟಿ ಹೊಂದಿರುವ ಯುವ ನಾಯಕ ಶ್ರೀಯುತರಾದ “ಶ್ರೀನಿವಾಸ್ ಮಾರಪ್ಪ” ನವರು.
ಶ್ರೀ ಕೃಷ್ಣನ ಸ್ನೇಹ ಪಡೆದ ಕುಚೇಲನು ಬಡವನೇ? ಪರಮಾತ್ಮನೇ ಪರಮಾಪ್ತನಾದ ಮೇಲೆ ಪರಮಾನಂದ ಅಲ್ಲವೇ?
ಈ ಪುಸ್ತಕಕ್ಕೆ ಎಲ್ಲಾ ರೀತಿಯ ಸಹಾಯ ಸಹಕಾರ ನೀಡಿ ಬೆನ್ನೆಲುವಾಗಿ ನಿಂತಿರುವ “ಶ್ರೀನಿವಾಸ್ ಮಾರಪ್ಪ”ನವರನ್ನು ನಮ್ಮ ಪ್ರೀತಿಯ ದೊರೆಯೆನ್ನಬಹುದು. ಇವರಿಗೆ ರಾಜ್ ಮುರಳಿ (ಮಂಜು.ಪಿ)ಯ ಹೃದಯ ಪೂರ್ವಕ ಪ್ರೀತಿಯ ಧನ್ಯವಾದಗಳು…
“ಪ್ರತಿಭೆ ಇರುವವರನ್ನು ಗುರುತಿಸುವವರೇ ನಿಜವಾದ ಪ್ರತಿಭಾವಂತರು, ಹೃದಯವಂತರು ಅಲ್ಲವೆ”



Reviews
There are no reviews yet.