ಜಾನಪದ ಬಹುಮುಖಿ ಚಿಂತನೆ
Out of stock
₹235.00
Author: ಷಕೀಬ್ ಎಸ್ ಕಣದ್ಮನೆ
Publishers Name: HSRA ಪ್ರಕಾಶನ
Out of stock
All India Shipping
Timely Arrival:
5–10 Days
To Your Doorstep
Secure Payments
UPI • Cards • Net Banking
100% Safe & Secure
Free Shipping
On Orders Above
₹999
share This book
Book Description
ಬೇಕ್ಷೆಯ ನಾಡಿನ ನನ್ನೀಯ ಗೆಳೆಯ ಪರಿಚಯವಾದದ್ದು, ಗೋಡಿಹಾಳದ ಬಯಲಾಟದಲ್ಲಿ, ಸಹೋದರ ಮಹಿಬೂಬ್ಬನೊಂದಿಗೆ ಬಂದಿದ್ದು, ರಾತ್ರಿ ‘ಭೋಜನದೊಂದಿಗೆ – ಮುಂಜಾನೆಯ ಭಜನೆಯವರೆಗೂ ಜತೆಗಿದ್ದವರು.
ಡಾ| ಪತೀಬ್ ಅವರ ಕುತೂಹಲ ಇನ್ನಷ್ಟು ತಿಳಿಯಬೇಕು. ತಿಳಿದಷ್ಟು ಅರಿವಿನಲ್ಲಿ ಉಳಿಯಬೇಕು, ಅರಿವಿಗೆ ಬಂದಷ್ಟು ಮತ್ತೋರ್ವರಿಗೆ ತಿಳಿಸಬೇಕು ಎಂಬುವ ಸಹೃದಯಿ. ಅದರ ಭಾಗವೆನ್ನುವಂತೆ ಸಂಪಾದಕನ ಪಾತ್ರವನ್ನು ವಹಿಸಿ ಹಲವಾರು ವಿಚಾರಗಳನ್ನು ಸಂಪಾದಿಸಿ “ಜಾನಪದೀಯ ಬಹುಮುಖಿ ಚಿಂತನೆ” ಅನ್ನುವ ಶೀರ್ಷಿಕೆಯಡಿಯಲ್ಲಿ ಹೊರಪ್ರಪಂಚಕ್ಕೆ ಜನಪದೀಯ ವಿವಿಧ ನೆಲೆಗಳು, ಅದರ ಅಲೆಗಳನ್ನು ಪರಿಚಯಿಸುವ ಪ್ರಯತ್ನ ಮಾಡಿಕೊಂಡಿದ್ದಾರೆ.
ಪುರಾಣ ಮತ್ತು ಜಾನಪದ ಸಮುದಾಯದ ಕಸುಬುದಾರಿಕೆ, ಜನಪದೀಯರಲ್ಲಿ ನಂಬಿಕೆಗಳು, ಬೀದಿನಾಟಕಗಳಲ್ಲಾದ ಬದಲಾವಣೆಗಳು, ಜಾನಪದೀ ನೆಲೆಗಳಲ್ಲಿ ಬೈಗುಳಗಳು, ರಂಗಭೂಮಿ ಪರಂಪರೆ, ಶಿವಶರಣೆ ಮಹಾದೇವಮ್ಮ ಎನ್ನುವ ಇಂತಹ ಹಲವಾರು ವಿಚಾರಗಳನ್ನು ಒಂದೇ ಸೂರಿನಡಿಯಲ್ಲಿ ಸಂಪಾದಿಸಿ ಪ್ರಕಟಿಸುತ್ತಿದ್ದಾರೆ. ಅವರ ಚಿಂತನೆ, ಪರಿಕಲ್ಪನೆ, ಪ್ರಕರತೆಯನ್ನು ಪಡೆಯಲಿ, ಜನಪದಕ್ಕೆ ಜಾನಪದೀಯ ನೆಲೆಯಲ್ಲಿ ಶಾಶ್ವತ ಸ್ಥಾನ ಸಿಗಲಿ, ಗೆಳೆಯ, ಸಾಹಿತಿ, ಸಂಶೋಧಕ ಷಕೀಬನಿಗೆ ಇನ್ನಷ್ಟು ಸಂಪಾದಿಸುವ ಶೋಧಿಸುವ ವಿಷಯ ದಕ್ಕಲಿ ಎನ್ನುವ ಹೆಬ್ಬಯಕೆಯೊಂದಿಗೆ ಸರ್ವಜ್ಞನ ಶರಣು.
ಬಸವಲಿಂಗಯ್ಯ ಹಿರೇಮಠ
ರಂಗ ತಜ್ಞರು, ಜಾನಪದ ವಿದ್ವಾಂಸರು, ಧಾರವಾಡ.



Reviews
There are no reviews yet.