ಮನುಜನಿವನು ಮೃಷ್ಟಾನ್ನ ಭೋಜನ ಪ್ರಿಯನು
ಎರಡು ಹೊತ್ತು ಉಂಡವ ಯೋಗಿಯಾಗುವನು
ಮೂರು ಹೊತ್ತು ಉಂಡವ ಭೋಗಿಯಾಗುವನು
ನಾಲ್ಕು ಹೊತ್ತು ಉಂಡವನು ರೋಗಿಯಾಗುವನು
ಉತ್ತಮ ಆರೋಗ್ಯಕ್ಕಾಗಿ ನಿತ್ಯ ಯೋಗ ಮಾಡಬೇಕು
ಆಧುನಿಕ ಜೀವನ ಶೈಲಿಯಿದು ಚಿಂತನೆ ನಡೆಸಬೇಕು
ನಮ್ಮ ಆರೋಗ್ಯವನ್ನು ನಾವೇ ಕಾಪಾಡಿಕೊಳ್ಳಬೇಕು
ನಮ್ಮ ಮನಸ್ಸು ಬುದ್ಧಿಯನ್ನು ಹಿಡಿತದಲ್ಲಿಡಬೇಕು
ಅಜ್ಞಾನದ ಅಂಧಕಾರವ ಕಳೆಯುವುದು ಜ್ಞಾನಯೋಗ
ಜೀವನದಲ್ಲಿ ಧನಾತ್ಮಕತೆ ತರುವುದು ಕರ್ಮಯೋಗ
ಭಗವಂತನ ಭಕ್ತಿಯಿಂದ ಧ್ಯಾನಿಸುವುದು ಭಕ್ತಿಯೋಗ
ಮನಸ್ಸು ಬುದ್ಧಿ ಸಂಸ್ಕಾರ ಕಲಿಸುವುದು ರಾಜಯೋಗ
ಯೋಗಿಯಾಗು ಪರಿಪೂರ್ಣತೆ ಪಡೆದು ಜ್ಞಾನಿಯಾಗು
ಮನಸ್ಸಿದ್ದರೆ ಮಾರ್ಗ ಛಲದಿಂದ ಕಲಿತು ಯೋಗ್ಯನಾಗು
ದೇಹಕ್ಕೆ ಶಕ್ತಿ ವ್ಯಾಯಾಮ ಪ್ರಾಣಾಯಾಮ ಮಾಡು
ಯೋಗಕ್ಕಿಲ್ಲ ಯಾವುದೇ ಜಾತಿ ಧರ್ಮದ ಕಟ್ಟು ಪಾಡು
ಪೂರ್ಣಿಮಾ ರಾಜೇಶ್
ಬೆಂಗಳೂರು
ಪ್ರಕಟಣೆಗಾಗಿ ಸಂಪರ್ಕಿಸಿ:
ಇದು ವೆಬ್ ಸೈಟ್ ಮತ್ತು ಯ್ಯಾಪ. ಇದರಲ್ಲಿ ಪ್ರಕಟಣೆಗಾಗಿ ನಿಮ್ಮ ಕವನ, ಕಥೆ, ಪ್ರಬಂಧ, ಲೇಖನ ಹಾಗೂ ಪುಸ್ತಕ ವಿಮರ್ಶೆಗಳನ್ನು ಕಳುಹಿಸಬಹುದು.
WhatsApp No. 8310000414 ಗೆ ಕಳುಹಿಸಬಹುದು.
ಇದನ್ನೂ ಓದಿ: ನಮ್ಮ ಇಂದಿನ ಸುಖಿ ಬದುಕು ಬುದ್ಧ ಬಾಬಾಸಾಹೇಬರು ನೀಡಿದ ಭಿಕ್ಷೆ
ಈಗಲೇ ವಾಟ್ಸಾಪ್ ಚಾನೆಲ್ ಫಾಲೋ ಮಾಡಿ: ಕ್ಲಿಕ್ ಮಾಡಿ