+918310000414
contact@kannadabookpalace.com
+918310000414
contact@kannadabookpalace.com
₹125.00 Original price was: ₹125.00.₹115.00Current price is: ₹115.00.
Timely Arrival: 4-8 Days to Your Doorstep
Safe and Secure: Your Payments Protected
Above order amount: 999
ಕವಯತ್ರಿಯವರಾದ ಚಂದ್ರಕಲಾ ಇಟಗಿಮಠ ಅವರು ಸೃಜನಶೀಲ ಮನಸ್ಸಿನವರು! “ಇವರ್ನ ನಂಬುದರ ಹೆಂಗಂತಿನಿ…?” ಇವರ ಎರಡನೆಯ ಕವನಸಂಕಲನವಾಗಿದೆ. 2022ರಲ್ಲಿ “ಚಂದ್ರಲಹರಿ” ಎಂಬ ಹೆಸರಿನ ಕೃತಿಯನ್ನು ಹೊರತಂದಿದ್ದಾರೆ. ಪಕ್ವ ಅನುಭವಗಳಿಂದ ಕವನ ರಚಿಸುವ ಇವರು ತಮ್ಮ ಕವನಗಳಲ್ಲಿ ನೋವು, ನಲಿವು, ಬದುಕಿನ ವಿವಿಧ ಮಜಲುಗಳ ತೊಳಲಾಟ ಏನೆಲ್ಲವನ್ನು ಸೂಕ್ಷ್ಮ ಮನಸ್ಸಿನಿಂದ ಓದಿದಾಗ ಇವರೊಬ್ಬ ಚಿಂತನಶೀಲ ವ್ಯಕ್ತಿತ್ವದ ಸ್ವಾಸ್ಥ್ಯ ಸಮಾಜವನ್ನು ನಿರ್ಮಾಣ ಮಾಡುವ ಕವನಗಳನ್ನು ರಚಿಸಿದ್ದಾರೆ ಎಂಬುದು ಗೊತ್ತಾಯಿತು. ಈ ಕವನಸಂಕಲನದ ಅರವತ್ತೂ ಕವನಗಳೂ ಒಂದಕ್ಕೊಂದು ಮಿಗಿಲೆಂಬಂತೆ ತಮ್ಮ ಘನತೆಯನ್ನು ಹೆಚ್ಚಿಸಿಕೊಂಡಿವೆ.
ಈ ಮಾನವ ಪ್ರಪಂಚದಲ್ಲಿ ನೋವು ಯಾರಿಗಿಲ್ಲ ಹೇಳಿ ? ಆ ನೋವುಗಳನ್ನು ಮೆಟ್ಟಿ ನಿಲ್ಲುವುದೇ ಸಾರ್ಥಕ ಬದುಕಿನ ಲಕ್ಷಣವಾಗಿದೆ. ವೃತ್ತಿಯಲ್ಲಿ ಶಿಕ್ಷಕಿಯಾಗಿರುವ ಚಂದ್ರಕಲಾ ಅವರು ತಮ್ಮ ವೃತ್ತಿಯ ಜೊತೆ ಜೊತೆಗೆ ಪ್ರವೃತ್ತಿಯಾದ ಸಾಹಿತ್ಯ ರಚನೆಯ ಕೆಲಸದಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವುದು ಅವರ ನಾಡು ನುಡಿಯ ಕಳಕಳಿಯನ್ನು ಎತ್ತಿ ತೋರಿಸುತ್ತದೆ. ಮಹಿಳೆ ಮನಸ್ಸು ಮಾಡಿದರೆ ತನ್ನ ಶಿಕ್ಷಣದ ಮೂಲಕ ಏನೆಲ್ಲಾ ಬದಲಾವಣೆ ತರಬಲ್ಲಳೆಂಬುದಕ್ಕೆ ಚಂದ್ರಕಲಾ ಒಂದು ಉತ್ತಮ ಉದಾಹರಣೆ ಆಗಿ ನಿಂತಿದ್ದಾರೆ.
Sector No. 46 navanagar bagalkot
+918310000414
contact@kannadabookpalace.com
www.kannadabookpalace.com
©2021-2025 Kannada Book Palace All Rights Reserved
Reviews
There are no reviews yet.