ನಾರಿ ಆಗಿದ್ದಳು ಆದಿಕಾಲದಲ್ಲಿ ಅಭಲೆ
ಆಧುನಿಕ ಕಾಲಕ್ಕವಳು ಆಗಿರುವವಳು ಸಭಲೆ
ನಮ್ಮ ಅಕ್ಷರದವ್ವ ಸಾವಿತ್ರಿಬಾಯಿ ಬಾಪುಲೆ
ಸಬಲೀಕರಣಕ್ಕಾಗಿ ಶ್ರಮಪಟ್ಟ ಹೆಣ್ಣು ಭಲೇ ಭಲೆ
ಆಕೆಯ ಕೊರಳಿಗಿತ್ತು ಬಾಲ್ಯ ವಿವಾಹದ ಸಂಕೋಲೆ
ಪತಿಯ ಜೊತೆಗೆ ಶಾಲೆ ಕಲಿತ ಮೊದಲ ಬಾಲೆ
ಆಗ ವಿದ್ಯೆ ಕಲಿತವರಿಗೆ ಇರುತ್ತಿರಲಿಲ್ಲ ಬೆಲೆ
ಅಕ್ಷರದ ಜ್ಞಾನವ ಅರಿತಿದ್ದ ಪತಿ ಜ್ಯೋತಿ ಬಾಪುಲೆ
ಅನಕ್ಷರತೆ ತೊಲಗಿಸಲು ಪಣತೊಟ್ಟಳು ನಾರಿ
ಕಲ್ಲು ಸಗಣಿ ಬೀಸುತ್ತಿದ್ದರು ಮೈಮೇಲೆ ತೂರಿ
ಶಾಲೆಗೆ ಹೋದಮೇಲೆ ಉಡುತಿದ್ದಳು ಬೇರೆಯ ಸೀರೆ
ಅವಮಾನಿಸಿದರು ಬಿಡಲಿಲ್ಲಾಕೆ ತಾನು ಹಿಡಿದ ದಾರಿ
ಕೀಳು ಕುಲದ ಅಬಲೆಯರಿಗೆ ಆಕೆಯೇ ಸಹೋದರಿ
ಹೆಣ್ಣಿನ ಸಾಕ್ಷರ ಕುಲಕ್ಕೆ ಅವಳಾದಳು ಮಾದರಿ
ಅಂದು ವಿದ್ಯೆ ಕಲಿಯಲು ಆದಳಾಕೆ ರಾಯಭಾರಿ
ಮುಂದೆ ಮೊಳಗಿತು ವಿಜಯದ ಜಯಭೇರಿ
ಒಂದೇ ಸಲಕ್ಕೆ ಗೆದ್ದರೆ ತೋರುವರು ಮಂದಹಾಸ
ಸೋತು ಗೆದ್ದರೆ ಸೃಷ್ಟಿಸುವುದು ಇತಿಹಾಸ
ಮೊದಲು ಮಾಡಿದರು ಆಕೆಗೆ ಅವಮಾನ
ಮುಂದೆ ಸಾಲು ಸಾಲು ಸರಣಿ ಸನ್ಮಾನ
ಶಿವಲೀಲಾ ಧನ್ನಾ
ಜಿಲ್ಲಾ : ಕಲ್ಬುರ್ಗಿ
ಪ್ರಕಟಣೆಗಾಗಿ ಸಂಪರ್ಕಿಸಿ:
ಇದು ವೆಬ್ ಸೈಟ್ ಮತ್ತು ಯ್ಯಾಪ. ಇದರಲ್ಲಿ ಪ್ರಕಟಣೆಗಾಗಿ ನಿಮ್ಮ ಕವನ, ಕಥೆ, ಪ್ರಬಂಧ, ಲೇಖನ ಹಾಗೂ ಪುಸ್ತಕ ವಿಮರ್ಶೆಗಳನ್ನು ಕಳುಹಿಸಬಹುದು.
WhatsApp No. 8310000414 ಗೆ ಕಳುಹಿಸಬಹುದು.
-
- Sale! Add to basket
- ಕವನ ಸಂಕಲನ (Poetry Collection)
ಕಪ್ಪೆಚಿಪ್ಪಿನೊಳಗಿನ ಮುತ್ತು
- Original price was: ₹100.00.₹90.00Current price is: ₹90.00.
-

