ನನ್ನ ಅಪ್ಪನ ಬಾರವನ್ನು ಹೊತ್ತು
ತಿರುಗಿದ ಚಪ್ಪಲಿ ಇಂದು ನಮ್ಮ
ಮನೆಯ ಅಟ್ಟವನ್ನೇರಿದೆ
ಅದೇಷ್ಟೋ ಸಾರಿ ಮುಳ್ಳಿನಿಂದ
ಕಲ್ಲಿನಿಂದ ನನ್ನ ಅಪ್ಪನ ಪಾದ
ಕಾಪಾಡಿದ ಚಪ್ಪಲಿ ಇಂದು ಜೇಡರ
ಹುಳುವಿಗೆ ಆಸರೆಯಾಗಿದೆ
ತಂದಾಗಿನಿಂದ ಮುಳ್ಳುಗಳಿಂದ
ಚುಚ್ಚಿಸಿಕೊಂಡು ಮಳೆಯ ನೀರಿನಿಂದ
ತೊಯ್ದು ಬಿಸಿಲಿನ ತಾಪಕ್ಕೆ ಮೆತ್ತಗಾಗಿ
ನನ್ನ ಅಪ್ಪನ ಕಾಲು ತಾಕಿದ ತಕ್ಷಣ
ಎಲ್ಲವನ್ನೂ ಮರೆತು ಕಾಯಕ ನಿರತವಾದ
ಚಪ್ಪಲಿ ಇಂದು ಬಿಸಿಲಿನ ತಾಪವೂ
ಇಲ್ಲದೆ, ಮಳೆ ಹನಿಯ ತಂಪುಯಿಲ್ಲದೆ
ಮೂಲೆಯ ಅತಿಥಿಯಾಗಿದೆ
ಅನೇಕ ತ್ಯಾಪೆಗಳಿಂದ ಅಲಂಕೃತವಾದ
ಚಪ್ಪಲಿ ನನ್ನ ಹೊಸ ಬಟ್ಟೆ ಶೋಕಿಗಾಗಿ
ನೊಂದಿದೆ ಹಗಲು ರಾತ್ರಿ ಎನ್ನದೆ
ಹೊಲ, ಮನೆಯ ದಾರಿ ತುಳಿದಿದೆ
ನನ್ನ ಕಾಲಿಗೆ ಹೊಸ ಚಪ್ಪಲಿ ಸೇರಿಸಲು
ದಣಿದಿದೆ ಹೊಸ ಅಂಗಿ, ಹೊಸ ಜೀವನ,
ಹೊಸ ಊರಿನ ಪ್ರಯಾಣಕೆ ಮೆಟ್ಟಿಲಾಗಿದೆ
ನನ್ನ ಅಪ್ಪನ ಹಳೆಚಪ್ಪಲಿ
ನನ್ನ ಹೊಸ ಜೀವನಕ್ಕೆ ದುಡಿದಿದೆ
ಅಪ್ಪನ ಕಾಲಿಗೆ ಮುಳ್ಳು ಚುಚ್ಚದೆ
ಅವನ ಕಷ್ಟಕ್ಕೆ ಜೊತೆಯಾಗಿದೆ
ನನ್ನ ಬದುಕಿಗೆ ದಾರಿ ತೋರಿದೆ
ಡಾ ಶರಣಪ್ಪ ಆಡಕಾರ
ಸಾ. ಚಿಂಚಲಿ
ತಾ.ಜಿ. ಗದಗ ೫೮೨೧೧೭
೮೯೭೦೫೮೪೪೨೦
ಪ್ರಕಟಣೆಗಾಗಿ ಸಂಪರ್ಕಿಸಿ:
ಇದು ವೆಬ್ ಸೈಟ್ ಮತ್ತು ಯ್ಯಾಪ. ಇದರಲ್ಲಿ ಪ್ರಕಟಣೆಗಾಗಿ ನಿಮ್ಮ ಕವನ, ಕಥೆ, ಪ್ರಬಂಧ, ಲೇಖನ ಹಾಗೂ ಪುಸ್ತಕ ವಿಮರ್ಶೆಗಳನ್ನು ಕಳುಹಿಸಬಹುದು.
WhatsApp No. 8310000414 ಗೆ ಕಳುಹಿಸಬಹುದು.
-
- Sale! Add to basket
- ರನ್ನನ ಗದಾಯುದ್ಧ (Battle of Rannan)
ರನ್ನನ ಹೊಸಗನ್ನಡ ಗದಾಯುದ್ಧ
- Original price was: ₹150.00.₹140.00Current price is: ₹140.00.
-
- Sale! Add to basket
- ಕವನ ಸಂಕಲನ (Poetry Collection)
ಚಿಗುರೆಲೆ ಸಂಭ್ರಮ
- Original price was: ₹85.00.₹80.00Current price is: ₹80.00.